Home » ಬೆಳ್ಳಾರೆ : ಅಸೌಖ್ಯದಿಂದ ಬಾಲಕ ಮೃತ್ಯು

ಬೆಳ್ಳಾರೆ : ಅಸೌಖ್ಯದಿಂದ ಬಾಲಕ ಮೃತ್ಯು

by Praveen Chennavara
0 comments

ಸುಳ್ಯ : ಅಸೌಖ್ಯದಿಂದ ಬಳಲುತ್ತಿದ್ದ ಮೂರುವರೆ ವರ್ಷ ಪ್ರಾಯದ ಮಗು ಮೃತಪಟ್ಟ ಘಟನೆ ಎ.13 ರಂದು ವರದಿಯಾಗಿದೆ.

ಬೆಳ್ಳಾರೆಯ ಲಕ್ಷ್ಮೀ ವೆಂಕಟ್ರಮಣ ದೇವಸ್ಥಾನದ ಬಳಿಯ ನಿವಾಸಿ ರಮೇಶ್ ಪೈ – ಸವಿತಾ ಪೈ ದಂಪತಿಯ ಮೂರುವರೆ – ವರ್ಷದ ಮಗು ಹರ್ಷಿತ್ ಗೆ 6 ತಿಂಗಳ ಹಿಂದೆ ಹೊಟ್ಟೆ ನೋವು ಕಾಣಿಸಿಕೊಂಡಾಗ ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು.

ಮಗುವನ್ನು ಪರೀಕ್ಷಿಸಿದ ವೈದ್ಯರು ಕಿಡ್ನಿಯಲ್ಲಿ ಗೆಡ್ಡೆ ಬೆಳೆದಿರುವುದು ತಿಳಿದು ಬಂತು. ವೈದ್ಯರ ಸಲಹೆ ಮೇರೆಗೆ ಮಗುವನ್ನು ಮಂಗಳೂರಿನ ಕೆ.ಎಂ.ಸಿ. ಆಸ್ಪತ್ರೆಗೆ ಕರೆದೊಯದು ಚಿಕಿತ್ಸೆ ಕೊಡಿಸಲಾಯಿತಾದರೂ ಪ್ರಯೋಜವಾಗದೆ ಮಗು ಮೃತಪಟ್ಟಿದೆ. ಮೃತ ಮಗು ಹರ್ಷಿತ್ ತಂದೆ, ತಾಯಿ, ಸಹೋದರಿ ರಶ್ಮಿ ಪೈಯನ್ನು ಅಗಲಿದ್ದಾರೆ.

You may also like

Leave a Comment