Home » Karnataka High court verdict: ಸಹೋದರಿ ಕುಟುಂಬದ ಸದಸ್ಯೆ ಅಲ್ಲ! ಹೈಕೋರ್ಟ್‌ ನಿಂದ ಮಹತ್ವದ ತೀರ್ಪು!! ಏನಿದು ಪ್ರಕರಣ?

Karnataka High court verdict: ಸಹೋದರಿ ಕುಟುಂಬದ ಸದಸ್ಯೆ ಅಲ್ಲ! ಹೈಕೋರ್ಟ್‌ ನಿಂದ ಮಹತ್ವದ ತೀರ್ಪು!! ಏನಿದು ಪ್ರಕರಣ?

by Mallika
1 comment
Karnataka High court verdict

Karnataka High court verdict: ನಿಯಮಗಳ ಪ್ರಕಾರ ಸರಕಾರಿ ನೌಕರರು ಕರ್ತವ್ಯದಲ್ಲಿದ್ದಾಗ ಮೃತಪಟ್ಟರೆ ಅವರ ಕುಟುಂಬದ ಸದಸ್ಯರಿಗೆ ಬದಲಿ ಕೆಲಸ ನೀಡಲು ಅವಕಾಶವಿದೆ. ಆದರೆ ಇಲ್ಲೊಂದು ಕಡೆ ಸಹೋದರಿಯೋರ್ವಳು ತನ್ನ ಸಹೋದರನ ಮರಣದ ನಂತರ ಉದ್ಯೋಗ ಬೇಕೆಂದು ಒತ್ತಾಯಿಸಿದ್ದಾಳೆ. ಈಗ ಹೈಕೋರ್ಟ್‌(Karnataka High court verdict) ಇದರ ತೀರ್ಪು ನೀಡಿದ್ದು, “ಸಹೋದರಿಯರು ಕುಟುಂಬದ ಸದಸ್ಯರಲ್ಲ” ಎಂದು ಹೇಳಿದೆ.

ಸಹೋದರಿ ಸೆಷನ್ಸ್‌ ನ್ಯಾಯಾಲಯದಲ್ಲಿ ದಾವೆ ಹಾಕಿದ್ದು, ಅಲ್ಲಿ ಅರ್ಜಿ ತಿರಸ್ಕರಿಸಲಾಯಿತು. ನಂತರ ಅವರು ಹೈಕೋರ್ಟ್‌ ಮೊರೆ ಹೋಗಿದ್ದು, ಅಲ್ಲಿ ಇಬ್ಬರು ನ್ಯಾಯಮೂರ್ತಿಗಳ ಪೀಠವು ” ತಂಗಿಯನ್ನು ತನ್ನ ಸಹೋದರನ ಕುಟುಂಬದ ವ್ಯಾಖ್ಯಾನದಲ್ಲಿ ಸೇರಿಸಲಾಗಿಲ್ಲ” ಎಂದು ಹೇಳಿದ್ದಾರೆ.

ಈ ಕಾನೂನಿನ ಅಡಿಯಲ್ಲಿ ಸಹೋದರಿಗೆ ಕೆಲಸ ನೀಡಲು ಕಂಪನಿ ನಿರಾಕರಿಸಿತ್ತು. ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್ (ಬೆಸ್ಕಾಂ) ಉದ್ಯೋಗಿಯೊಬ್ಬರು ಕರ್ತವ್ಯದಲ್ಲಿದ್ದಾಗ ಸಾವನ್ನಪ್ಪಿದ ಪ್ರಕರಣ ಇದಾಗಿದ್ದು, ತುಮಕೂರಿನವಾರದ ಸಹೋದರಿ ಪಲ್ಲವಿ ಸಹಾನುಭೂತಿಯ ಆಧಾರದ ಮೇಲೆ ಕಂಪನಿಯಿಂದ ಕೆಲಸ ಕೇಳಿದರು. ಕಂಪನಿ ನಿರಾಕರಿಸಿದಾಗ, ಅವರು ಸೆಷನ್ಸ್ ನ್ಯಾಯಾಲಯದಲ್ಲಿ ಕೇಳಲು ಹೋದಾಗ, ಅಲ್ಲಿ ಏಕ ನ್ಯಾಯಾಧೀಶರು ಅರ್ಜಿಯನ್ನು ತಿರಸ್ಕರಿಸಿದರು. ಸೆಷನ್ಸ್ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಪಲ್ಲವಿ ಹೈಕೋರ್ಟ್ ಮೆಟ್ಟಿಲೇರಿದ್ದರು.

ಪಲ್ಲವಿ ಪರ ವಕೀಲರು ವಾದ ಮಂಡಿಸಿ, ಆಕೆ ತನ್ನ ಸಹೋದರನ ಮೇಲೆ ಅವಲಂಬಿತಳಾಗಿದ್ದು, ಕುಟುಂಬದ ಸದಸ್ಯಳಾಗಿರುವ ಆಕೆಗೆ ಅನುಕಂಪದ ಆಧಾರದ ಮೇಲೆ ಕೆಲಸ ನೀಡಬೇಕು ಎಂದು ಹೇಳಿದ್ದಾರೆ. ಕರ್ನಾಟಕ ಹೈಕೋರ್ಟ್ಇದಕ್ಕಾಗಿ ಕಂಪನಿಗಳ ಕಾಯಿದೆ 1956 ಮತ್ತು ಕಂಪನಿಗಳ ಕಾಯಿದೆ 2013 ಅನ್ನು ನ್ಯಾಯಾಲಯ ಉಲ್ಲೇಖಿಸಿದೆ.

ಇದನ್ನೂ ಓದಿ: ಮುಂದಿನ 4 ದಿನ ಬರಲಿದೆ ಭರ್ಜರಿ ಮಳೆ!!! ಚಂಡಮಾರುತದ ಸೂಚನೆ, ಅಲರ್ಟ್‌ ಜನರೇ!!!

You may also like

Leave a Comment