Ration Card Updates: ರಾಜ್ಯ ಕಾಂಗ್ರೆಸ್ ಸರಕಾರದ ಮಹತ್ವದ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯ ಕುರಿತು ಮಹತ್ವದ ಮಾಹಿತಿಯೊಂದು (Ration Card Updates)ಹೊರಬಿದ್ದಿದೆ.
ಅದೇನೆಂದರೆ ಸುಳ್ಳು ಮಾಹಿತಿ ನೀಡಿ ಯೋಜನೆಗಳ ಲಾಭ ಪಡೆಯುವವರ ಬಗ್ಗೆ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ.
ಗೃಹಲಕ್ಷ್ಮೀ ಯೋಜನೆಗೆ ಮುಖ್ಯವಾಗಿ ಬೇಕಾಗಿರುವ ರೇಷನ್ಕಾರ್ಡ್ ನಲ್ಲಿ ಗೋಲ್ಮಾಲ್ ನಡೆಯುತ್ತಿದೆ ಎನ್ನಲಾಗಿದೆ. ಅಂದರೆ ಒಂದೇ ಕುಟುಂಬದಲ್ಲಿ ರೇಷನ್ಕಾರ್ಡ್ ಬೇರೆ ಬೇರೆ ಮಾಡುತ್ತಿದ್ದಾರೆ ಎಂದು ವರದಿಯಾಗಿದೆ. ಈ ಕಾರಣದಿಂದಾಗಿ ಸರಕಾರವು ಅನರ್ಹ ಪಡಿತರ ಚೀಟಿದಾರರ ಪಟ್ಟಿ ಮಾಡಿದ್ದು, ಕಾರ್ಡ್ಗಳನ್ನು ರದ್ದು ಮಾಡಿದೆ. ಒಂದೇ ಕುಟುಂಬದಲ್ಲಿ ಎರಡು, ಮೂರು ರೇಷನ್ಕಾರ್ಡ್ ವಿಭಜನೆಗೆ ಅವಕಾಶ ನೀಡದಂತೆ ಹಣಕಾಸು ಇಲಾಖೆ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯನ್ನು ಒತ್ತಾಯ ಮಾಡಿದೆ.
ಹಾಗಾಗಿ ಅತ್ತೆಗೊಂದು ರೇಷನ್ಕಾರ್ಡ್, ಸೊಸೆಗೊಂದು ರೇಷನ್ಕಾರ್ಡ್ ಮೂಲಕ ಸೌಲಭ್ಯ ಪಡೆಯುತ್ತಿದ್ದವರಿಗೆ, ಪಡೆಯುವವರಿಗೆ, ನಿರೀಕ್ಷೆಯಲ್ಲಿರುವವರಿಗೆ ಬಿಗ್ಶಾಕ್ವೊಂದು ಮುಂದಿದೆ ಎನ್ನಲಾಗಿದೆ.
ಇದನ್ನೂ ಓದಿ: Harrassement Case: ಸಾಲದ ಕಂತು ಕಟ್ಟದ ಮಹಿಳೆಗೆ ದಿಗ್ಭಂಧನ ಹಾಕಿದ ಫೈನಾನ್ಸ್ ಸಂಸ್ಥೆ! ನೊಂದ ರೈತ ಮಹಿಳೆ ಮಾಡಿದ್ದೇನು?
