7th Pay Commission: ಕೇಂದ್ರ ಸರ್ಕಾರವು (Central Government)ಅಕ್ಟೋಬರ್ ಆರಂಭದಲ್ಲಿ ಪಿಂಚಣಿದಾರರು ಮತ್ತು ಕೇಂದ್ರ ನೌಕರರ ತುಟ್ಟಿಭತ್ಯೆಯಲ್ಲಿ(DA)ಶೇಕಡಾ 4 ರಷ್ಟು ಹೆಚ್ಚಳವನ್ನು ಘೋಷಿಸಿದ್ದು, ಇದು ಜುಲೈ 1 ರಿಂದ ಜಾರಿಗೆ ಬರಲಿದೆ. ಈ ಹೆಚ್ಚಳದ ಬಳಿಕ ಪಿಂಚಣಿದಾರರು ಮತ್ತು ಉದ್ಯೋಗಿಗಳ ಪರಿಹಾರ ಶೇಕಡಾ 42 ರಿಂದ 46 ಕ್ಕೆ ಹೆಚ್ಚಳ ಕಂಡಿದೆ. ಪಿಂಚಣಿ ಇಲಾಖೆ ಸದ್ಯ, ಈ ಬಗ್ಗೆ ಮಾಹಿತಿ ನೀಡಿದ್ದು, ಹೆಚ್ಚಿದ ತುಟ್ಟಿಭತ್ಯೆ (7th Pay Commission) ಯಾವಾಗ? ಯಾವ ನೌಕರರ ಡಿಆರ್ ಹೆಚ್ಚಾಗುತ್ತದೆ? ಎಂದು ತಿಳಿಸಿದೆ.
ಕೇಂದ್ರ ಸರ್ಕಾರದ (Central Government)ಇಲಾಖೆಯಿಂದ ಜ್ಞಾಪಕ ಪತ್ರವನ್ನು ಹೊರಡಿಸಲಾಗಿದೆ. ಯಾವ ಪಿಂಚಣಿದಾರರಿಗೆ ಹಣದುಬ್ಬರ ಪರಿಹಾರ ಹೆಚ್ಚಳದ ಪ್ರಯೋಜನವನ್ನು ನೀಡಲಾಗುತ್ತದೆ ಎಂಬ ಮಾಹಿತಿಯನ್ನು ಪಿಂಚಣಿ ಮತ್ತು ಪಿಂಚಣಿದಾರರ ಕಲ್ಯಾಣ ಇಲಾಖೆ (ಡಿಒಪಿಪಿಡಬ್ಲ್ಯೂ 2023 ರ ಅಕ್ಟೋಬರ್ 27 ರಂದು ಹೊರಡಿಸಿದ ಜ್ಞಾಪಕ ಪತ್ರದಲ್ಲಿ ತಿಳಿಸಲಾಗಿದೆ. ಕೇಂದ್ರ ಸರ್ಕಾರವು ಪಿಂಚಣಿದಾರರಿಗೆ ಡಿಆರ್ ಅನ್ನು ಶೇಕಡಾ 4 ರಷ್ಟು ಹೆಚ್ಚಳ ಮಾಡಿದ್ದು, ಪಿಂಚಣಿದಾರರ ಮೂಲ ಪಿಂಚಣಿ 40,000 ರೂ.ಗಳಾಗಿದ್ದರೆ, ಶೇಕಡಾ 42 ರಷ್ಟು ಡಿಆರ್ ಪ್ರಕಾರ, ತುಟ್ಟಿಭತ್ಯೆ ಪರಿಹಾರವು 16,000 ರೂ.ಗಿಂತ ಹೆಚ್ಚಾಗಲಿದೆ. ಹೊಸ ಹೆಚ್ಚಳದ ನಂತರ, ಮೂಲ ಪಿಂಚಣಿಯಲ್ಲಿ ಹಣದುಬ್ಬರ ಪರಿಹಾರವು 18 ಸಾವಿರ ರೂಪಾಯಿಗಳಿಗಿಂತ ಹೆಚ್ಚಾಗುತ್ತದೆ. ಅಂದರೆ ಪಿಂಚಣಿದಾರರು ತಿಂಗಳಿಗೆ 1,000 ರೂ.ಗಿಂತ ಹೆಚ್ಚಿನ ಪಿಂಚಣಿ ಪಡೆಯಲಿದ್ದಾರೆ.ವರದಿಯ ಅನುಸಾರ, ಬ್ಯಾಂಕುಗಳು ಪಿಂಚಣಿದಾರರಿಗೆ ಆದಷ್ಟು ಶೀಘ್ರ ಪಿಂಚಣಿ ನೀಡಬೇಕು ಎಂದು ಸರ್ಕಾರ ಹೇಳಿದೆ ಎನ್ನಲಾಗಿದೆ.
ನಾಗರಿಕ ಕೇಂದ್ರ ಸರ್ಕಾರಿ ಪಿಂಚಣಿದಾರರು ಅಥವಾ ಕುಟುಂಬ ಪಿಂಚಣಿದಾರರು, ಸಶಸ್ತ್ರ ಪಡೆಗಳ ಪಿಂಚಣಿದಾರರು ಮತ್ತು ರಕ್ಷಣಾ ವಲಯದ ನಾಗರಿಕ ಪಿಂಚಣಿದಾರರು, ಅಖಿಲ ಭಾರತ ಸೇವಾ ಪಿಂಚಣಿದಾರರು, ರೈಲ್ವೆ ಪಿಂಚಣಿದಾರರು, ನಿಬಂಧನೆ ಪಿಂಚಣಿದಾರರು ಮತ್ತು ಬರ್ಮಾದ ಕೆಲವು ಪಿಂಚಣಿದಾರರಿಗೆ ಡಿಆರ್ ಹೆಚ್ಚಳದ ಅನುಕೂಲ ಪಡೆಯಲಿದ್ದಾರೆ. ಇದರ ಜೊತೆಗೆ ನ್ಯಾಯಾಂಗ ಇಲಾಖೆಯ ಆದೇಶದ ಬಳಿಕ,ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಾಧೀಶರು ಸಹ ಡಿಆರ್ ಹೆಚ್ಚಳ ಪಡೆಯಲಿದ್ದಾರೆ.
