Home » Kodi shri: ನಿಜವಾಯ್ತು ಕೋಡಿ ಶ್ರೀಗಳು ನುಡಿದ ಭಯಾನಕ ಸತ್ಯ – ಏನದು ಗೊತ್ತಾ?!

Kodi shri: ನಿಜವಾಯ್ತು ಕೋಡಿ ಶ್ರೀಗಳು ನುಡಿದ ಭಯಾನಕ ಸತ್ಯ – ಏನದು ಗೊತ್ತಾ?!

1 comment
Kodi shree

Kodi shree: ಕರ್ನಾಟಕದಲ್ಲಿ ಭವಿಷ್ಯ ನುಡಿಯುವ ವಿಚಾರಕ್ಕೆ ಕೋಡಿ ಮಠದ ಶ್ರೀಗಳು ಪ್ರಸಿದ್ಧಿ ಪಡೆದಿದ್ದು ಅವರು ನುಡಿದ ಭವಿಷ್ಯ ವಾಣಿ ಬಹುತೇಕ ನಿಜವಾಗಿದೆ. ಇದೀಗ ಮತ್ತೊಂದು ವಿಚಾರದ ಬಗ್ಗೆ ಅವರು ಭವಿಷ್ಯ ನುಡಿದಿದ್ದು ಸದ್ಯ ರಾಜ್ಯ ಮಟ್ಟದಲ್ಲಿ ಈ ವಿಚಾರ ಚರ್ಚೆಯಾಗುತ್ತಿದ್ದು ಅದು ನಿಜವಾಗಿದೆ ಎಂಬ ವಿಚಾರ ಭಾರೀ ಸದ್ದುಮಾಡುತ್ತಿದೆ.

ಇದನ್ನೂ ಓದಿ: Andhra Pradesh: ಜಮೀನು ವಿವಾದ; ಪೋಷಕರಿಗೆ ಮನಬಂದಂತೆ ಥಳಿಸಿದ ಮಗ

ಕೆಲವು ಸಮಯದ ಹಿಂದೆ ಕೋಡಿ ಶ್ರೀಗಳು(Kodi shri) ಮಹಾನ್ ನಾಯಕರ ಸಾವು, ಪ್ರಕೃತಿ ವಿಪ್ಲವದ ಸುಳಿವು, ಇಬ್ಬರು ರಾಷ್ಟ್ರಮಟ್ಟದ ನಾಯಕರಿಗೆ ಸಾವಿನ ಕಂಟಕ, ಓರ್ವ ಧಾರ್ಮಿಕ ಪ್ರಮುಖನಿಗೆ ಸಾವು ಸಂಭವಿಸುತ್ತದೆ ಎಂಬ ಭಯಾನಕ ಭವಿಷ್ಯದೊಂದಿಗೆ ಬಾಂಬ್ ಸ್ಫೋಟಗೊಳ್ಳುತ್ತದೆ ಎಂಬ ಭವಿಷ್ಯವನ್ನು ನುಡಿದಿದ್ದರು. ಇದೀಗ ಬಾಂಬ್ ಸ್ಪೋಟದ ಭವಿಷ್ಯ ನಿಜವಾಗಿದೆ ಎನ್ನಲಾಗಿದೆ.

ಹೌದು, ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ನುಡಿದ ಭವಿಷ್ಯ ನಿಜವಾಯ್ತಾ ಎಂಬ ಅನುಮಾನ ಈಗ ಕಾಡತೊಡಗಿದೆ. ಯಾಕೆಂದರೆ ಇತ್ತೀಚೆಗಷ್ಟೇ ಬೆಂಗಳೂರಿನ ರಾಮೇಶ್ವರಂ ಕೆಫೆ(Rameshwaram caffe) ನಲ್ಲಿ ಭಾರೀ ಸ್ಫೋಟ ಆಗಿರುವದೇ ಅವರು ನುಡಿದ ಭವಿಷ್ಯ ನಿಜ ಆಗಿದೆಯೆಂದು ಚರ್ಚೆ ಆಗುತ್ತಿದೆ.

You may also like

Leave a Comment