Home » Canara Bank: ಕೆನರಾ ಬ್ಯಾಂಕ್ ಖಾತೆ ಇದ್ದರೆ ಸಾಕು! ಅತೀ ಕಡಿಮೆ ಬಡ್ಡಿಯಲ್ಲಿ 10 ಲಕ್ಷದವರೆಗೆ ಸಾಲ ಸೌಲಭ್ಯ ಖಚಿತ!

Canara Bank: ಕೆನರಾ ಬ್ಯಾಂಕ್ ಖಾತೆ ಇದ್ದರೆ ಸಾಕು! ಅತೀ ಕಡಿಮೆ ಬಡ್ಡಿಯಲ್ಲಿ 10 ಲಕ್ಷದವರೆಗೆ ಸಾಲ ಸೌಲಭ್ಯ ಖಚಿತ!

8 comments
Canara Bank

Canara Bank: ಸ್ವಂತ ಉದ್ಯಮದ ಕನಸು ಕಾಣುತ್ತಿರುವವರಿಗಾಗಿಯೇ ಕೇಂದ್ರ ಸರ್ಕಾರ ಪ್ರಧಾನ ಮಂತ್ರಿ ಮುದ್ರಾ ಯೋಜನೆ (ಪಿಎಂಎಂವೈ)ಯನ್ನು ಜಾರಿಗೆ ತಂದಿದೆ. ಕಡಿಮೆ ಬಡ್ಡಿಯೊಂದಿಗೆ ಮತ್ತು ಅಪಾಯ ಮುಕ್ತ ಸಾಲವನ್ನು ನೀವು ಈ ಯೋಜನೆಯ ಮೂಲಕ ಪಡೆಯಬಹುದು. ಮುದ್ರಾ ಯೋಜನೆಯನ್ನು ಕೇಂದ್ರ ಸರ್ಕಾರವು 2015 ರಲ್ಲಿ ಪ್ರಾರಂಭಿಸಿತ್ತು. ಮುದ್ರಾ ಯೋಜನೆಯಡಿ, ನೀವು ವ್ಯವಹಾರವನ್ನು ವಿಸ್ತರಿಸಲು ಬಂಡವಾಳ ಅಗತ್ಯವಿದ್ದರೆ, ನೀವು ಪ್ರಧಾನ ಮಂತ್ರಿ ಮುದ್ರಾ ಯೋಜನೆಯಡಿ 50 ಸಾವಿರದಿಂದ 10 ಲಕ್ಷ ರೂ.ವರೆಗೆ ಸಾಲವನ್ನು ನೀಡುತ್ತದೆ.

ರಾಜ್ಯ ಸರ್ಕಾರದಿಂದ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ 3000 ರೂ ; ಸಚಿವ ಕೃಷ್ಣ ಬೈರೇಗೌಡ!

ಇದೀಗ ಈ ಸಾಲವನ್ನು ನೀವು ಭಾರತ ದೇಶದ ಅತ್ಯಂತ ದೊಡ್ಡ ಬ್ಯಾಂಕುಗಳಲ್ಲಿ ಒಂದಾಗಿರುವಂತಹ ಕೆನರಾ ಬ್ಯಾಂಕ್ (Canara Bank) ನಲ್ಲಿ ಕೂಡ ಪಡೆದುಕೊಳ್ಳಬಹುದಾಗಿದೆ. ಈ ಯೋಜನೆ ಅಡಿಯಲ್ಲಿ ಕೆನರಾ ಬ್ಯಾಂಕ್ (Canara Bank) ನಲ್ಲಿ 50000 ಗಳಿಂದ 10 ಲಕ್ಷ ರೂಪಾಯಿಗಳ ವರೆಗೆ ನೀವು ಲೋನ್ ಪಡೆದುಕೊಳ್ಳಬಹುದಾಗಿದೆ.

ಸಾಮಾನ್ಯವಾಗಿ ಈ ಲೋನ್ ಮೇಲೆ 9.85 ಪ್ರತಿಶತ ಬಡ್ಡಿದರವನ್ನ ವಿಧಿಸಲಾಗುತ್ತದೆ. ಈ ಲೋನ್ (Loan) ಮರುಪಾವತಿ ಮಾಡೋದಕ್ಕೆ ಐದರಿಂದ ಏಳು ವರ್ಷಗಳ ಕಾಲ ಸಮಯಾವಕಾಶವಿರುತ್ತದೆ. ಅದಲ್ಲದೆ 5 ಲಕ್ಷಗಳವರೆಗೆ ಲೋನ್ ಪಡೆದುಕೊಂಡರೆ ಯಾವುದೇ ರೀತಿಯ ಅಧಿಕ ಶುಲ್ಕ ಕಟ್ಟಬೇಕಾದ ಅಗತ್ಯವಿಲ್ಲ ಹಾಗೂ ಈ ಲೋನ್ ಅನ್ನು ನೀವು ಯಾವುದೇ ಗ್ಯಾರೆಂಟಿ ಇಲ್ಲದೆ ಪಡೆದುಕೊಳ್ಳಬಹುದಾಗಿದೆ.

ಲೋನ್ ಪಡೆದುಕೊಳ್ಳಲು ಅರ್ಜಿ ಸಲ್ಲಿಸುವಂತಹ ವ್ಯಕ್ತಿ ವಯಸ್ಸು 18 ವರ್ಷ ಮೇಲಿರಬೇಕು ಮತ್ತು ಭಾರತೀಯ ನಾಗರಿಕನಾಗಿರಬೇಕು. ಆದರೆ ಈ ಹಿಂದೆ ಯಾವುದೇ ರೀತಿಯ ಸಾಲವನ್ನು ಪಡೆದುಕೊಂಡು ಡೀಫಾಲ್ಟರ್ ಆಗಿರಬಾರದು ಹಾಗೂ ಕಳೆದ ಎರಡು ವರ್ಷದ ಬ್ಯಾಂಕ್ ಟ್ರಾನ್ಸ್ಫರ್ ರೆಕಾರ್ಡ್ ಉತ್ತಮವಾಗಿರಬೇಕು.

ಕೆನರಾ ಬ್ಯಾಂಕ್ ನಲ್ಲಿ ಸಾಲ ಪಡೆದುಕೊಳ್ಳಲು ಬೇಕಾಗಿರುವ ದಾಖಲೆಗಳು:
ಪಾಸ್ ಬುಕ್
ಆಧಾರ್ ಕಾರ್ಡ್ (Aadhaar Card) ಪ್ಯಾನ್ ಕಾರ್ಡ್ (PAN Card)
ಐಡಿ ಪ್ರೂಫ್
ಆದಾಯ ಪ್ರಮಾಣ ಪತ್ರ ಪರಿಯೋಜನ ರಿಪೋರ್ಟ್.
ಕಳೆದ ಎರಡು ವರ್ಷದ ಬ್ಯಾಂಕ್ ಟ್ರಾನ್ಸಾಕ್ಷನ್ ಡಾಕ್ಯೂಮೆಂಟ್.
ಈ ವರ್ಷದ ನಿಮ್ಮ ವ್ಯಾಪಾರದ ಟ್ರಾನ್ಸಾಕ್ಷನ್ ಡಾಕ್ಯೂಮೆಂಟ್.
ಪಾಸ್ಪೋರ್ಟ್ ಸೈಜ್ ಫೋಟೋ ಹಾಗೂ ಮೊಬೈಲ್ ನಂಬರ್ ನೀಡಬೇಕು.

ಸಾಲ ಪಡೆದುಕೊಳ್ಳಲು ಮೊದಲು ನಿಮ್ಮ ಹತ್ತಿರದ ಕೆನರಾ ಬ್ಯಾಂಕ್ (Canara Bank) ಶಾಖೆಗೆ ಹೋಗಿ ಮುದ್ರಾ ಲೋನ್ ಯೋಜನೆ (Mudra Loan Yojana) ಯನ್ನು ಯಾವ ರೀತಿಯಲ್ಲಿ ಪಡೆದುಕೊಳ್ಳಬಹುದು ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳಿ. ಅಲ್ಲಿ ನಿಮಗೆ ಲೋನ್ ಅರ್ಜಿ ಸಲ್ಲಿಸುವುದಕ್ಕೆ ಫಾರ್ಮ್ ಅನ್ನು ನೀಡಲಾಗುತ್ತದೆ ಅದನ್ನು ಸರಿಯಾಗಿ ಭರ್ತಿ ಮಾಡಿ ಹಾಗೂ ಅದಕ್ಕೆ ಬೇಕಾಗಿರುವಂತಹ ಡಾಕ್ಯುಮೆಂಟ್ ಗಳನ್ನು ಸರಿಯಾಗಿ ಅಟಾಚ್ ಮಾಡಿ ನಂತರ ಅಧಿಕಾರಿಗಳಿಗೆ ನೀಡಿ. ಅಧಿಕಾರಿಗಳು ಸರಿಯಾದ ರೀತಿಯಲ್ಲಿ ಅರ್ಜಿ ದಾಖಲೆಯನ್ನು ಪರೀಕ್ಷಿಸಿ, ನಂತರ ನಿಮ್ಮ ಹಣವನ್ನು ನಿಮ್ಮ ಖಾತೆಗೆ ವರ್ಗಾವಣೆ ಮಾಡುತ್ತಾರೆ.

ಹೋಟೆಲ್ ರೂಮಿನಲ್ಲಿ ಗಂಡನ ಜತೆ ಸಿಕ್ಕಿ ಬಿದ್ದಿದ್ರಾ ನಟಿ ಸಪ್ತಮಿ ಗೌಡ ? ಯುವರಾಜ್ ಪತ್ನಿ ಗಂಭೀರ ಆರೋಪ !

 

You may also like

Leave a Comment