2
Dharmasthala : ಧರ್ಮಸ್ಥಳಕ್ಕೆ ಶ್ರೀ ಮಂಜುನಾಥ ಸ್ವಾಮಿಯ ದರ್ಶನಕ್ಕೆ ಎಂದು ತೆರಳಿದ್ದ ಕೊಪ್ಪಳ ಮೂಲದ ಶಿಕ್ಷಕರು ಒಬ್ಬರು ಕೊಳೆತ ಶವವಾಗಿ ಪತ್ತೆಯಾಗಿರುವ ಘಟನೆ ನಡೆದಿದೆ.
ಕುಷ್ಟಗಿ ತಾಲೂಕಿನ ಜುಮಲಾಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪ್ರಭಾರಿ ಮುಖ್ಯ ಶಿಕ್ಷಕ ಬಸವರಾಜ ಪೊಲೀಸ್ ಪಾಟೀಲ(35) ಮೃತ ವ್ಯಕ್ತಿ. ಅವರು ನಾಲ್ಕು ದಿನಗಳ ಹಿಂದೆ ಧರ್ಮಸ್ಥಳಕ್ಕೆ ತೆರಳಿದ್ದರು. ಆದರೆ ಇದೀಗ ಜುಲೈ 20ರಂದು ಭಾನುವಾರ ಧರ್ಮಸ್ಥಳದ ನೇತ್ರಾವತಿ ಸೇತುವೆಯ ಕೆಳಭಾಗ ಹಳೆಯ ರಸ್ತೆಯಲ್ಲಿ ಅವರ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಇದನ್ನೂ ಓದಿ: France: ಫ್ರಾನ್ಸ್ನಲ್ಲಿ ಕೇವಲ 100 ರೂಪಾಯಿಗೆ ಮನೆಗಳು ಲಭ್ಯ – ಹಾಗೆ ಷರತ್ತು ಅನ್ವಯ! ಇದು ಸಾಧ್ಯನಾ?
