Home » Chethan Ahimsa: “ಟಿಪ್ಪು ಸುಲ್ತಾನ್ KRSಗೆ ‘ಆಧಾರ ಶಿಲೆ’ ಎನ್ನಬಹುದು”: ಚೇತನ್ ಅಹಿಂಸಾ

Chethan Ahimsa: “ಟಿಪ್ಪು ಸುಲ್ತಾನ್ KRSಗೆ ‘ಆಧಾರ ಶಿಲೆ’ ಎನ್ನಬಹುದು”: ಚೇತನ್ ಅಹಿಂಸಾ

0 comments

Chethan Ahimsa: ಕೃಷ್ಣರಾಜ ಜಲಾಶಯಕ್ಕೆ ಅಡಿಗಲ್ಲು ಹಾಕಿದ್ದು ಟಿಪ್ಪು ಸುಲ್ತಾನ್ ಎಂಬ ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ. ಹೆಚ್.ಸಿ. ಮಹದೇವಪ್ಪ ಅವರ ಹೇಳಿಕೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದು, ಪರ ಹಾಗೂ ವಿರುದ್ದದ ಅಭಿಪ್ರಾಯಗಳು ಕೇಳಿಬರುತ್ತಿವೆ.

ಈ ನಡುವೆ ಟಿಪ್ಪು ಸುಲ್ತಾನ್ KRSಗೆ ‘ಆಧಾರ ಶಿಲೆ’ ಎನ್ನಬಹುದು ಎಂದು ನಟ ಚೇತನ್ ಅಹಿಂಸಾ ಹೇಳಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಅವರು ಮಾಹಿತಿ ಹಂಚಿಕೊಂಡಿದ್ದು, ಮೈಸೂರು ಮೂಲದ ಟಿಪ್ಪು ಸಂಶೋಧಕ ಪ್ರೊಫೆಸರ್ ಗುರುಸಿದ್ಧಯ್ಯ ಅವರ ಮಾತುಗಳ ಪ್ರಕಾರ, ಶಾಸನಗಳ ಆಧಾರದಲ್ಲಿ ಟಿಪ್ಪು ಸುಲ್ತಾನ್ ಇವತ್ತಿನ KRS ಅಣೆಕಟ್ಟು ಇರುವ ಸ್ಥಳದ ಬಳಿ ಅಣೆಕಟ್ಟು ಕಟ್ಟುವ ಉದ್ದೇಶ ಹೊಂದಿದ್ದರು ಅನ್ನೋದು ಗೊತ್ತಾಗುತ್ತದೆ ಎಂದಿದ್ದಾರೆ.

ಟಿಪ್ಪು ಅಣೆಕಟ್ಟು ನಿರ್ಮಾಣವನ್ನು ಪ್ರಾರಂಭಿಸಲ್ಲವಾದರೂ, ಇವತ್ತಿನ ಅಣೆಕಟ್ಟು ಅದೇ ಸುತ್ತಮುತ್ತಲಿನ

ಸ್ಥಳದಲ್ಲಿ ನಿರ್ಮಾಣವಾಗಿರುವುದರಿಂದ ಅವರನ್ನೂ KRSಗೆ ‘ಆಧಾರ ಶಿಲೆ’ ಎನ್ನಬಹುದು ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Accident: ಜಮೀನಿನಲ್ಲಿ ಉಳುಮೆ – ಯಂತ್ರ ಒಳಗೆ ಸಿಲುಕಿ ಯುವಕನ ದೇಹ ಛಿದ್ರ ಛಿದ್ರ

You may also like