Home » ಮದುವೆಗೆ ಬರಬೇಡಿ-ಕರೆಯೋಲೆ ಹಂಚಿದರು | ಕೋವಿಡ್ ಹಿನ್ನೆಲೆ ವಧು-ವರರ ಮನವಿ

ಮದುವೆಗೆ ಬರಬೇಡಿ-ಕರೆಯೋಲೆ ಹಂಚಿದರು | ಕೋವಿಡ್ ಹಿನ್ನೆಲೆ ವಧು-ವರರ ಮನವಿ

by Praveen Chennavara
0 comments

ವಧು-ವರಮದುವೆಗೆ ಆಗಮಿಸದೇ ತಾವು ಇರುವ ಸ್ಥಳದಿಂದಲೇ ಆಶೀರ್ವದಿಸಿ ಹೀಗೊಂದು ವಿಶಿಷ್ಟವಾದ ಕರೆಯೋಲೆಯನ್ನು ವಧು-ವರನ ಕುಟುಂಬದವರು ತಮ್ಮ ಬಂಧು ಬಳಗದವರಿಗೆ ನೆಂಟರಿಷ್ಟರಿಗೆ, ಗ್ರಾಮಸ್ಥರಿಗೆ ಕಳುಹಿಸಿದ್ದಾರೆ.

ಹೌದು ಕೊರೊನಾ ಹರಡುವ ಹಾಗೂ ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸುವ ಹಿನ್ನೆಲೆಯಲ್ಲಿ ಈಗಾಗಲೇ ಮದುವೆಗೆ ಆಮಂತರಿತರಾದವರು ಬರುವುದು ಬೇಡ, ನೀವು ಇರುವ ಸ್ಥಳದಿಂದಲೇ ನೂತನ ವಧುವರರನ್ನು ಹಾರೈಸಿ ಎಂದು ಹೊಸ ಆಮಂತ್ರಣ ಪತ್ರ ಕಳುಹಿಸಿದ್ದಾರೆ.

ಚಾಮರಾಜನಗರ ತಾಲೂಕಿನ ಎ.ಸಿ.ಹೊಸೂರು ಗ್ರಾಮದ ಸುಷ್ಮಾ ಹಾಗೂ ಇದೇ ತಾಲೂಕಿನ ಚನ್ನಪ್ಪನಪುರದ ಶ್ರೇಯಸ್ ಅವರ ಮದುವೆ ಜನವರಿ 22 23ರಂದು ನಿಗದಿಯಾಗಿದೆ. ಈ ಮದುವೆಗೆ ಆಗಮಿಸುವಂತೆ ನೆಂಟರಿಷ್ಟರಿಗೆ ಬಂಧು. ಬಳಗಕ್ಕೆ, ಗ್ರಾಮಸ್ಥರಿಗೆ ಎಡು ಕಡೆಯವರು ಮೂರು ಸಾವಿರಕ್ಕೂ ಹೆಚ್ಚು ಲಗ್ನಪತ್ರಿಕೆಯನ್ನು ಅತ ಹಂಚಿದ್ದರು.

ಆದರೆ ಇತ್ತೀಚೆಗೆ ಕೊರೊನಾ ವ್ಯಾಪಕವಾಗಿ ಹರಡುತ್ತಿರುವುದರಿಂದ ಎರಡೂ ಕುಟುಂಬಗಳು ಫೇಸ್ ಬುಕ್ ವಾಟ್ಸಪ್ ಸೇರಿದಂತೆ ಸಾಮಾಜಿಕ ಜಾಲತಾಣಗಳ ಮೂಲಕ ಆಮಂತ್ರಣ ಕಳುಹಿಸಿ ಮದುವೆಗೆ ಆಗಮಿಸದೆ ತಾವು ಇರುವ ಸ್ಥಳದಿಂದಲೇ ವಧುವರರನ್ನು ಆಶೀರ್ವದಿಸಿ ಎಂದು ಮನವಿ ಮಾಡಿವೆ.

You may also like

Leave a Comment