ಬೆಂಗಳೂರು: ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಆರ್ ಎಸ್ ಎಸ್ ಚಡ್ಡಿ ಸುಡೋ ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತದೆ ಎಂದು ಹೇಳಿದ ಬಳಿಕ, ರಾಜ್ಯದಲ್ಲಿ ಈಗ ಚಡ್ಡಿವಾರ್ ಶುರುವಾಗಿದೆ. ಬಿಜೆಪಿಯ ನಾಯಕರ ವಾಕ್ ಸಮರ ತಾರಕಕ್ಕೇರಿದೆ.
ಇದರ ಮುಂದುವರಿದ ಭಾಗವಾಗಿ ಈ ಬಗ್ಗೆ ಯೂಟ್ಯೂಬ್ ಲಿಂಕ್ ಸಹಿತ ಶೇರ್ ಮಾಡಿರುವಂತ ಬಿಜೆಪಿ ಕರ್ನಾಟಕ, ” ಸಿದ್ಧರಾಮಯ್ಯನವರೇ, ವಿಧಾನಸಭೆಯಲ್ಲಿ ನಿಮ್ಮ ಪಂಚೆ ಉದುರಿ ಹೋದಾಗ, ನಿಮ್ಮ ಮಾನ ಕಾಪಾಡಿದ್ದೇ ಚಡ್ಡಿಯಾಗಿದೆ. ಈ ಚಡ್ಡಿಯನ್ನು ನೀವು ಸುಡುತ್ತೇವೆ ಎಂದು ಹೇಳಿದ್ದೀರಿ. ಚಡ್ಡಿ ಸುಟ್ಟ ಬಳಿಕ ಪಂಚೆ ಗಟ್ಟಿಯಾಗಿರಲಿ” ಎಂಬುದಾಗಿ ವ್ಯಂಗ್ಯವಾಡಿದೆ.