Home » ವಿಕಾಸ ಥಟ್ ಅಂತ ಹೇಳಿ ಬೆಂಗಳೂರಿನ ರಾಹುಲ್ ಪ್ರಥಮ.

ವಿಕಾಸ ಥಟ್ ಅಂತ ಹೇಳಿ ಬೆಂಗಳೂರಿನ ರಾಹುಲ್ ಪ್ರಥಮ.

0 comments

ವಿಜಯನಗರ(ಹೊಸಪೇಟೆ): ವಿಕಾಸ ಬ್ಯಾಂಕಿನ ಬೆಳ್ಳಿಹಬ್ಬದ ಸಂಭ್ರಮಾಚರಣೆಯ ಪ್ರಯುಕ್ತ, ಯಾಜಿ ಪ್ರಕಾಶನ ಮತ್ತು ವಿವಿಡ್ಲಿಪಿ ಸಹಯೋಗದೊಡನೆ ಡಾ.ನಾ. ಸೋಮೇಶ್ವರ ಅವರ ನೇತೃತ್ವದಲ್ಲಿ ಕನ್ನಡಿಗರಿಗಾಗಿ ಕನ್ನಡದ ಜನಪ್ರಿಯ “ವಿಕಾಸ ಥಟ್ ಅಂತ ಹೇಳಿ” ಸರಣಿ ಕಾರ್ಯಕ್ರಮ, ಸೋಮವಾರದಂದು ಆನ್ಲೈನ್ ವೇದಿಕೆಯಲ್ಲಿ ನಡೆಯಿತು.

ಈ ವಾರದ ಸ್ಪರ್ಧೆಯನ್ನು ವಿಶೇಷವಾಗಿ ಯುವ ಸಮುದಾಯಕ್ಕಾಗಿ ಹಮ್ಮಿಕೊಳ್ಳಲಾಗಿತ್ತು. ಗಂಗಾವತಿ ಶಾಖೆಯಿಂದ ಸಹನಾ.ಜಿ, ಕೊಟ್ಟೂರು ಶಾಖೆಯಿಂದ ಅನಿತಾ.ಎಚ್, ಬೆಂಗಳೂರಿನಿಂದ ರಾಹುಲ್ ಹಾಗೂ ತೊರಣಗಲ್ಲು ಶಾಖೆಯಿಂದ ಮಧುಸೂದನ್.ಎಮ್ ಅವರು ಸ್ಪರ್ಧಿಗಳಾಗಿ ಭಾಗವಹಿಸಿದ್ದರು.

8 ಸುತ್ತುಗಳ ಕಾರ್ಯಕ್ರಮದಲ್ಲಿ ಅಂತಿಮವಾಗಿ ಬೆಂಗಳೂರಿನ ರಾಹುಲ್ 140 ಅಂಕ ಗಳಿಸುವ ಮೂಲಕ ಪ್ರಥಮ ಸ್ಥಾನ ಪಡೆದರು. ಉಳಿದಂತೆ ತೊರಣಗಲ್ಲಿನ ಮಧುಸೂದನ್.ಎಮ್ 120 ಅಂಕಗಳನ್ನು, ಕೊಟ್ಟೂರಿನ ಅನಿತಾ.ಎಚ್ 100 ಅಂಕಗಳನ್ನು ಹಾಗೂ ಗಂಗಾವತಿಯ ಸಹನಾ.ಜಿ 70 ಅಂಕಗಳನ್ನು ಗಳಿಸಿದರು.

ಈ ಕಾರ್ಯಕ್ರಮವು ಬಳ್ಳಾರಿ ಶಾಖೆಯ ಬಸಯ್ಯ.ಎಸ್.ಪಿ ಮತ್ತು ಅವರ ತಂಡದ ಮುಂದಾಳತ್ವದಲ್ಲಿ ನಡೆಯಿತು.
ಕಾರ್ಯಕ್ರಮದ ನೇರ ಪ್ರಸಾರ ವಿಕಾಸ ಬ್ಯಾಂಕಿನ ಯೂಟ್ಯೂಬ್ ಮತ್ತು ಫೇಸ್ಬುಕ್ ನಲ್ಲಿ ಹಾಗೂ ವಿವಿಡ್ಲಿಪಿಯ ಯೂಟ್ಯೂಬ್ ಮತ್ತು ಫೇಸ್ಬುಕ್ ಚಾನೆಲ್ ನಲ್ಲಿ ಪ್ರಸಾರಗೊಂಡಿತ್ತು.

You may also like

Leave a Comment