Home » ಚಾಲಕರು, ಕ್ಲೀನರ್, ನೀರುಗಂಟಿಗಳಿಗೆ ಸಿಹಿ ಸುದ್ದಿ

ಚಾಲಕರು, ಕ್ಲೀನರ್, ನೀರುಗಂಟಿಗಳಿಗೆ ಸಿಹಿ ಸುದ್ದಿ

0 comments

ರಾಜ್ಯದ ವಿವಿಧ ನಗರ ಸ್ಥಳೀಯ ಸಂಸ್ಥೆಗಳಲ್ಲಿನ 11,133 ಪೌರ ಕಾರ್ಮಿಕರ ಸೇವೆಯನ್ನು ಕಾಯಂಗೊಳಿಸುವ ಆದೇಶವನ್ನು ಹೊರಡಿಸಲಾಗುವುದು ಎಂದು ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ ತಿಳಿಸಿದ್ದಾರೆ.

ವಿಧಾನ ಪರಿಷತ್ ನಲ್ಲಿ ಬಿಜೆಪಿ ಸದಸ್ಯ ಆಯನೂರು ಮಂಜುನಾಥ್ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಸಚಿವ ಸಂಪುಟ ಸಭೆಯಲ್ಲಿ ಪೌರಕಾರ್ಮಿಕರ ಸೇವೆ ಕಾಯಂಗೊಳಿಸುವ ಬಗ್ಗೆ ಅನುಮೋದನೆ ನೀಡಲಾಗಿದೆ, ಕಾಯಂಗೊಂಡ ಪೌರಕಾರ್ಮಿಕರ ವೇತನ 15 ರಿಂದ 29,000 ರೂ.ಗೆ ತಲುಪಲಿದೆ.

ಇದೇ ರೀತಿ ಚಾಲಕರು, ಕ್ಲೀನರ್ ಗಳು, ನೀರು ಪೂರೈಕೆ ಕೆಲಸ ಮಾಡುವವರ ಸೇವೆಯನ್ನು ಕೂಡ ಹಂತ ಹಂತವಾಗಿ ಹಣಕಾಸಿನ ಲಭ್ಯತೆಯನ್ನು ಆಧರಿಸಿ ಕಾಯಂಗೊಳಿಸಲಾಗುವುದು ಎಂದು ಹೇಳಿದ್ದಾರೆ.

You may also like

Leave a Comment