Home » Manipur Violence: ಮಣಿಪುರ ಉದ್ನಿಗ್ನ! ರಜೆಯಲ್ಲಿ ತೆರಳಿದ ಯೋಧರಿಗೆ ಸಂದೇಶ ಕಳುಹಿಸಿದ ಸಿಆರ್‌ಪಿಎಫ್‌!

Manipur Violence: ಮಣಿಪುರ ಉದ್ನಿಗ್ನ! ರಜೆಯಲ್ಲಿ ತೆರಳಿದ ಯೋಧರಿಗೆ ಸಂದೇಶ ಕಳುಹಿಸಿದ ಸಿಆರ್‌ಪಿಎಫ್‌!

by Mallika
1 comment
Manipur violence

Manipur violence: ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರ( Manipur violence) ನಿಲ್ಲುವ ಹಾಗೆ ಕಾಣುತ್ತಿಲ್ಲ. ಪ್ರತಿ ಕ್ಷಣವೂ ರಾಜ್ಯದಲ್ಲಿ ಉದ್ವಿಗ್ನತೆ ಹೆಚ್ಚುತ್ತಿದೆ. ಏತನ್ಮಧ್ಯೆ, ಚುರಾಚಂದ್‌ಪುರದಲ್ಲಿ ಸಿಆರ್‌ಪಿಎಫ್‌ನ ಕೋಬ್ರಾ ಕಮಾಂಡೋ ಹತ್ಯೆಯ ನಂತರ ಪರಿಸ್ಥಿತಿ ಹದಗೆಟ್ಟಿದೆ. ಈ ಪರಿಸ್ಥಿತಿಯಲ್ಲಿ, ರಜೆ ನೀಡಲಾದ ಸಿಆರ್‌ಪಿಎಫ್ ಜವಾನರನ್ನು ಹತ್ತಿರದ ಭದ್ರತಾ ನೆಲೆಗೆ ವರದಿ ಮಾಡಲು ತಿಳಿಸಲಾಗಿದೆ. ಮಣಿಪುರದಲ್ಲಿ ನೆಲೆಸಿರುವ ಮತ್ತು ರಜೆಯ ಮೇಲೆ ತಮ್ಮ ಊರುಗಳಿಗೆ ತೆರಳಿರುವ ತನ್ನ ಜವಾನರನ್ನು ತಮ್ಮ ಕುಟುಂಬಗಳೊಂದಿಗೆ ಭದ್ರತಾ ನೆಲೆಯಲ್ಲಿ ವರದಿ ಮಾಡುವಂತೆ CRPF ಕೇಳಿಕೊಂಡಿದೆ.

ಸಿಆರ್‌ಪಿಎಫ್‌ನ ಕೋಬ್ರಾ ಕಮಾಂಡೋ ರಜೆಯಲ್ಲಿದ್ದಾಗ ಕೊಲ್ಲಲ್ಪಟ್ಟಿದ್ದು, ಹಾಗೂ ಅವರನ್ನು ಶುಕ್ರವಾರ ಮಧ್ಯಾಹ್ನ ದಾಳಿಕೋರರು ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ. ಈ ಪರಿಸ್ಥಿತಿಯಲ್ಲಿ ಇದೀಗ ಮಣಿಪುರದಿಂದ ಬರುವ ಆಫ್ ಡ್ಯೂಟಿ ಕಮಾಂಡರ್ ಗಳನ್ನು ಕೂಡಲೇ ಸಂಪರ್ಕಿಸಿ ಭದ್ರತಾ ನೆಲೆಗೆ ಬರುವಂತೆ ಸಂದೇಶ ನೀಡುವಂತೆ ಸಿಆರ್ ಪಿಎಫ್ ಪ್ರಧಾನ ಕಚೇರಿಯು ಫೀಲ್ಡ್ ಕಮಾಂಡರ್ ಗಳಿಗೆ ಆದೇಶ ಹೊರಡಿಸಿದೆ.

ಸುದ್ದಿ ಸಂಸ್ಥೆ ಪಿಟಿಐ ಪ್ರಕಾರ, ಸಿಆರ್‌ಪಿಎಫ್ ಜವಾನರಿಗೆ ಹೊರಡಿಸಲಾದ ಆದೇಶದ ಪ್ರಕಾರ, ರಜೆಯ ಮೇಲೆ ತವರು ಮನೆಗೆ ತೆರಳಿರುವ ಯೋಧರಿಗೆ ತಾವು ಅಸುರಕ್ಷಿತರಾಗಿದ್ದೇವೆ ಎಂದು ಭಾವಿಸಿದರೆ, ತಕ್ಷಣ ಅವರ ಬಳಿ ಇರುವ ಭದ್ರತಾ ಪಡೆ ನೆಲೆಯನ್ನು ಸಂಪರ್ಕಿಸಬಹುದು. ಇದರೊಂದಿಗೆ, ಮಣಿಪುರ ಮತ್ತು ನಾಗಾಲ್ಯಾಂಡ್ ವಲಯಗಳಲ್ಲಿರುವ ಸಿಆರ್‌ಪಿಎಫ್ ಕಚೇರಿಗಳಿಗೆ ಸಾಧ್ಯವಿರುವ ಎಲ್ಲ ಸಹಾಯವನ್ನು ನೀಡುವಂತೆ ಕೇಳಲಾಗಿದೆ ಎಂದು ವರದಿಯಾಗಿದೆ.

ಕೊಲ್ಲಲ್ಪಟ್ಟ ಸಿಆರ್‌ಪಿಎಫ್ ಕಮಾಂಡೋವನ್ನು 204 ನೇ ಕೋಬ್ರಾ ಬೆಟಾಲಿಯನ್‌ನ ಡೆಲ್ಟಾ ಕಂಪನಿಯ ಕಾನ್‌ಸ್ಟೆಬಲ್ ಚೋನ್‌ಖೋಲನ್ ಹಾಕಿಪ್ ಎಂದು ಗುರುತಿಸಲಾಗಿದೆ. ಮಾಹಿತಿ ಪ್ರಕಾರ, ದಾಳಿಕೋರರು ಪೊಲೀಸ್ ಸಮವಸ್ತ್ರವನ್ನು ಧರಿಸಿದ್ದರು ಮತ್ತು ಈ ಸಮಯದಲ್ಲಿ ಅವರು ಗ್ರಾಮಕ್ಕೆ ನುಗ್ಗಿ ಅವರನ್ನು ಕೊಂದಿದ್ದಾರೆ. ಮಣಿಪುರದಲ್ಲಿ ಹಿಂಸಾಚಾರದಲ್ಲಿ ಇಲ್ಲಿಯವರೆಗೆ 18-20 ಜನರು ಸಾವನ್ನಪ್ಪಿದ್ದಾರೆ ಮತ್ತು 100 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಆದರೆ, ಹಲವೆಡೆ ಪರಿಸ್ಥಿತಿ ಹದಗೆಡುತ್ತಿದೆ ಎಂಬ ಸುದ್ದಿಯೂ ಹೊರಬೀಳುತ್ತಿದ್ದು, ಪರಿಸ್ಥಿತಿ ಗಂಭೀರವಾಗಿರುವ ಪ್ರದೇಶಗಳಲ್ಲಿ ಹತೋಟಿಗೆ ತರಲು ಪಡೆ ಪ್ರಯತ್ನಿಸುತ್ತಿದೆ.

ಇದನ್ನೂ ಓದಿ:  ‘ಐಸಿಸ್ ಉಗ್ರಗಾಮಿ ಅಲ್ಲ ಎಂದು ನೀವು ಭಾವಿಸಿದರೆ ನೀವೂ ಸಹ ಭಯೋತ್ಪಾದಕರೇ..’ ಎಂದ ನಟಿ ಕಂಗನಾ!!!

You may also like

Leave a Comment