Viral Video: ಇಬ್ಬರು ಯುವಕರು ಹೇಸರಗತ್ತೆಗೆ ಸಿಗರೇಟ್ ಹೊಗೆ ಉಸಿರಾಡುವಂತೆ ಒತ್ತಾಯಿಸಿದ ಘಟನೆ ಕೇದಾರನಾಥ (Kedarnath) ಚಾರಣದಲ್ಲಿ ನಡೆದಿದೆ. ಸದ್ಯ ಈ ವಿಡಿಯೋ ವೈರಲ್ (Viral Video) ಆಗಿ, ಭಾರೀ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಹೇಸರಗತ್ತೆಯ ಮಾಲೀಕನನ್ನು ಬಂಧಿಸಲಾಗಿದೆ.
ಈ ಘಟನೆ ಕೇದಾರನಾಥಕ್ಕೆ 16 ಕಿಲೋಮೀಟರ್ ಉದ್ದದ ಚಾರಣ ಮಾರ್ಗದಲ್ಲಿ ಚೋಟಿ ಲಿಂಚೋಲಿ ಬಳಿಯ ಥಾರು ಕ್ಯಾಂಪ್ನಲ್ಲಿ ನಡೆದಿದೆ. ಓರ್ವ ಹೇಸರಗತ್ತೆಯ ಬಾಯಿ ಮತ್ತು ಒಂದು ಮೂಗನ್ನು ಬಿಗಿಯಾಗಿ ಹಿಡಿದಿದ್ದು, ಮತ್ತೋರ್ವ ಇನ್ನೊಂದು ಮೂಗಿನ ಹೊಳ್ಳೆಯ ಮೂಲಕ ಸಿಗರೇಟ್ ಹೊಗೆಯನ್ನು ಉಸಿರಾಡುವಂತೆ ಒತ್ತಾಯಿಸುತ್ತಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ.
ಈ ಅಮಾನವೀಯ ಕೃತ್ಯಕ್ಕೆ ನೆಟ್ಟಿಗರು ಆಕ್ರೋಶ ಹೊರಹಾಕಿದ್ದು, ಹೇಸರಗತ್ತೆ ನಿರ್ವಾಹಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಕಷ್ಟಪಟ್ಟು ಕೆಲಸ ಮಾಡುವಂತೆ ಮಾಡಲು ಪ್ರಾಣಿಗಳ ಇಂದ್ರಿಯಗಳನ್ನು ನಿಶ್ಚೇತನಗೊಳಿಸಲೆಂದು ಈ ರೀತಿ ಮಾಡಲಾಗುತ್ತಿದೆ ಎಂದು ಹಲವರು ಹೇಳಿದ್ದಾರೆ.
ಸದ್ಯ ಹೇಸರಗತ್ತೆ ಮಾಲೀಕ ರಾಕೇಶ್ ಸಿಂಗ್ ರಾವತ್ ಅವರನ್ನು ಬಂಧಿಸಲಾಗಿದೆ. ಆತನ ವಿರುದ್ಧ ಭಾರತೀಯ ದಂಡ ಸಂಹಿತೆ ಮತ್ತು ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆಯ ಸಂಬಂಧಿತ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಸಿಗರೇಟಿನಲ್ಲಿ ‘ಕಳೆ’ ತುಂಬಿದ್ದರೆ ಅದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಇನ್ಸ್ಪೆಕ್ಟರ್ ಸುರೇಶ್ ಚಂದ್ರ ಬಲುನಿ ಹೇಳಿದ್ದಾರೆ.
https://twitter.com/styris867/status/1672594857007943681?s=20
