Dharmastala: ಯುವಕನೋರ್ವ ನೆರೆಮನೆಯ ಮಹಿಳೆ ಸ್ನಾನಮಾಡುತ್ತಿದ್ದಾಗ ಬಚ್ಚಲು ಮನೆಗೆ ನುಗ್ಗಿ ಮಹಿಳೆಗೆ ಲೈಂಗಿಕ ಕಿರುಕುಳ (sexual harrasment) ನೀಡಿರುವ ಘಟನೆ ಬೆಳ್ತಂಗಡಿ (belthangady) ತಾಲೂಕಿನ ಧರ್ಮಸ್ಥಳದಲ್ಲಿ (Dharmastala) ನಡೆದಿದೆ.
ಮಹಿಳೆ (women) ರಾತ್ರಿಯ ವೇಳೆ ಬಚ್ಚಲು ಮನೆಗೆ ಸ್ನಾನಕ್ಕೆಂದು ಹೋದಾಗ ನೆರೆಮನೆಯ ಯುವಕ ಮನೋಜ್ ಒ.ಆರ್. ಅಕ್ರಮವಾಗಿ ಬಚ್ಚಲು ಮನೆ ಪ್ರವೇಶಿಸಿ ಅನುಚಿತವಾಗಿ ವರ್ತಿಸಿದ್ದೂ ಮಾತ್ರವಲ್ಲದೆ ಆಕೆಗೆ ಲೈಂಗಿಕ ಕಿರುಕುಳ ನೀಡಿದ್ದಾನೆ. ಈ ವೇಳೆ ಮಹಿಳೆ ಜೋರಾಗಿ ಕಿರುಚಾಡಿದ್ದು ಮಹಿಳೆಯ ಮನೆಯವರು ಹೊರಬರುವ ವೇಳೆ ಆರೋಪಿ ತಪ್ಪಿಸಿಕೊಂಡು ಓಡಿ ಹೋಗಿದ್ದಾನೆ ಎನ್ನಲಾಗಿದೆ. ಸದ್ಯ ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: Education News : ಪಠ್ಯಕ್ರಮದಲ್ಲಿ ಇನ್ನು ಮುಂದೆ ಲೈಂಗಿಕ ಶಿಕ್ಷಣ ಜಾರಿ: ಸರಕಾರದ ಆದೇಶ !
