K Venkatesh: ಪಶುಸಂಗೋಪನೆ ಇಲಾಖೆ (Department of Animal Husbandry and Fisheries) ಸಚಿವ ಕೆ.ವೆಂಕಟೇಶ್ (K Venkatesh) ಅವರು ಮೈಸೂರಿನ ಉತ್ತನಹಳ್ಳಿಯಲ್ಲಿ, ಪಶುಇಲಾಖೆ ಸಮಾರಂಭದಲ್ಲಿ ಮಾತನಾಡುತ್ತಾ, ಹೆಣ್ಣು ಕರು ಮಾತ್ರ ಹುಟ್ಟುವಂತೆ ಮಾಡುವ ಲಸಿಕೆಯೊಂದನ್ನು ನಮ್ಮ ಇಲಾಖೆ ತಯಾರಿ ಮಾಡಿದ್ದು. ಇದನ್ನು ಹಾಕೋದರಿಂದ ಕೇವಲ ಶೇ.95ರಷ್ಟು ಹೆಣ್ಣು ಕರು ಹುಟ್ಟುತ್ತದೆ, ಇದನ್ನು ವೈದ್ಯರ ಸಲಹೆ ಮೂಲಕ ಹಾಕಿಸಿ ಎಂದು ಹೇಳಿದರು.
ಒಂದು ಲಸಿಕೆಗೆ ರೂ.250 ಕೊಟ್ಟು ರೈತರು ಖರೀದಿ ಮಾಡುವಂತೆ ಹೇಳಿದರು.
ಗ್ಯಾರಂಟಿ ಯೋಜನೆಗಳಿಂದ ಆರ್ಥಿಕ ಸಮಸ್ಯೆ ಆಗಿದೆ. ಮುಂದಿನ ಹಂತದಲ್ಲಿ ಪಶು ಭಾಗ್ಯ ಪ್ರಾರಂಭ ಮಾಡಬೇಕು. ಪಶು ಸಂಗೋಪನೆ ಇಲಾಖೆಗೆ 18,000 ಸಿಬ್ಬಂದಿ ಅವಶ್ಯಕತೆ ಇದೆ. ಆದರೆ ವಾಸ್ತವವಾಗಿ 9,000 ಸಿಬ್ಬಂದಿ ಮಾತ್ರ ಇದ್ದಾರೆ. ಖಾಲಿ ಹುದ್ದೆಗಳನ್ನು ಆದಷ್ಟು ಬೇಗ ಭರ್ತಿ ಮಾಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿ ಮನವಿ ಮಾಡಿದರು ಎಂದು ಟಿವಿ9 ಕನ್ನಡ ಮಾಧ್ಯಮವೊಂದು ಪ್ರಕಟ ಮಾಡಿದೆ.
ಇದನ್ನೂ ಓದಿ:LPG ಬೆಲೆ ಇಳಿಕೆ ನಂತರ ಕೇಂದ್ರದಿಂದ ಮಧ್ಯಮ ವರ್ಗದವರಿಗೆ ಇನ್ನೊಂದು ಭರ್ಜರಿ ಗಿಫ್ಟ್!!!
