Home » Drought Relief Fund: ರಾಜ್ಯದ ರೈತರಿಗೆ ಮಹತ್ವದ ಸುದ್ದಿ- ಬರ ಪರಿಹಾರದ ಹಣ ಬೇಕಂದ್ರೆ 15 ದಿನದೊಳಗೆ ಈ ಕೆಲಸ ಕಡ್ಡಾಯ !!

Drought Relief Fund: ರಾಜ್ಯದ ರೈತರಿಗೆ ಮಹತ್ವದ ಸುದ್ದಿ- ಬರ ಪರಿಹಾರದ ಹಣ ಬೇಕಂದ್ರೆ 15 ದಿನದೊಳಗೆ ಈ ಕೆಲಸ ಕಡ್ಡಾಯ !!

1 comment
Drought Relief Fund

Drought Relief Fund: ರಾಜ್ಯದ ರೈತರೇ ನಿಮಗೆ ಮುಖ್ಯ ಮಾಹಿತಿ ಇಲ್ಲಿದೆ ನೋಡಿ!! 15 ದಿನದಲ್ಲಿ ‘ಈ ಮಾಹಿತಿ ಭರ್ತಿ’ ಮಾಡುವುದು ‘ಬರ ಪರಿಹಾರ'( Drouhht Relief Fund)ಪಡೆಯಲು ಕಡ್ಡಾಯವಾಗಿದೆ. ನಿಮ್ಮ ಪ್ರೂಟ್ ಐಡಿಯಲ್ಲಿ ದಾಖಲಾಗಿರುವ ಜಮೀನಿನ ಮಾಹಿತಿ ಆಧಾರದ ಅನುಸಾರ ಪರಿಹಾರ ಪಾವತಿ ಮಾಡಲಾಗುವ ಕುರಿತು ಕಂದಾಯ ಸಚಿವ ಕೃಷ್ಣಬೈರೇಗೌಡ(Krishna Byregowda) ಹೇಳಿದರು.

ಸಚಿವ ಕೃಷ್ಣಬೈರೇಗೌಡ ರೈತರಿಗೆ ಪರಿಹಾರ ಪಾವತಿ ಮಾಡುವ ವೇಳೆ ಫ್ರೂಟ್ ಐಡಿಯಲ್ಲಿ ದಾಖಲಾಗಿರುವ ಜಮೀನಿನ ಮಾಹಿತಿ ಆಧಾರದ ಮೇರೆಗೆ ಪರಿಹಾರ ಪಾವತಿಸಲಾಗುತ್ತದೆ.ಈ ನಿಟ್ಟಿನಲ್ಲಿ ರೈತರು ತಮ್ಮ ಜಮೀನಿನ ನಿಖರ ಮಾಹಿತಿಯನ್ನು ಮುಂದಿನ 15 ದಿನಗಳ ಒಳಗೆ ಫ್ರೂಟ್ಸ್ ದತ್ತಾಂಶದಲ್ಲಿ ಭರ್ತಿ ಮಾಡಿಸಬೇಕು. ಇದರ ಜೊತೆಗೆ ಅಧಿಕಾರಿಗಳ ಲಾಭದ ಹಿತಾಸಕ್ತಿ ಮತ್ತು ಅಕ್ರಮದಿಂದಾಗಿ ನೈಜ್ಯ ಫಲಾನುಭವಿಗಳಿಗೆ ಪರಿಹಾರದ ಹಣ ತಲುಪಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಜಮೀನಿನ ಮಾಹಿತಿ ನೀಡಿ ಒಂದು ತಿಂಗಳೊಳಗೆ ಇದನ್ನು ಸರಿ ಮಾಡಿಕೊಳ್ಳಲು ಜಿಲ್ಲಾಧಿಕಾರಿಗಳು ಮತ್ತು ಸ್ಥಳೀಯ ಆಡಳಿತಕ್ಕೆ ಸೂಚನೆ ನೀಡಿದ್ದಾರೆ.

ಇದನ್ನು ಓದಿ: ಬಿಜೆಪಿಯ ಹೊಸ ರಾಜ್ಯಾಧ್ಯಕ್ಷರ ಮುಂದಿವೆ ಈ 5 ಮಹಾನ್ ಸವಾಲುಗಳು !!

You may also like

Leave a Comment