Home » Bigg boss kannada: ಭವಿಷ್ಯದಲ್ಲಿ ಡ್ರೋನ್ ಪ್ರತಾಪ್ ಗೆ ಭಾರೀ ದೊಡ್ಡ ಗಂಡಾಂತರ ?! ಸ್ಪೋಟಕ ಭವಿಷ್ಯ ನುಡಿದ ವಿದ್ಯಾಶಂಕರಾನಂದ ಸ್ವಾಮಿಜಿ

Bigg boss kannada: ಭವಿಷ್ಯದಲ್ಲಿ ಡ್ರೋನ್ ಪ್ರತಾಪ್ ಗೆ ಭಾರೀ ದೊಡ್ಡ ಗಂಡಾಂತರ ?! ಸ್ಪೋಟಕ ಭವಿಷ್ಯ ನುಡಿದ ವಿದ್ಯಾಶಂಕರಾನಂದ ಸ್ವಾಮಿಜಿ

1 comment
Bigg boss kannada

Bigg boss kannada: ಕನ್ನಡದ ಬಿಗ್ ಬಾಸ್ ಸೀಸನ್ 10 ಈ ಭಾರೀ ಹಲವು ವಿಶೇಷತೆಗಳಿಂದ ಕೂಡಿದ್ದು ಇನ್ನೇನು ಕೆಲವೇ ವಾರಗಳಲ್ಲಿ ಮುಕ್ತಾಯವಾಗಲಿದೆ. ಇನ್ನು ಈ ಸಲ ಪ್ರತೀ ವಾರವೂ ಬಿಗ್ ಬಾಸ್(Bigg boss kannada) ಮನೆಗೆ ಒಬ್ಬೊಬ್ಬ ಹೊಸ ಅತಿಥಿಗಳನ್ನು ಕಳಿಸಿಕೊಡುತ್ತಿದೆ. ಅಂತೆಯೇ ಈ ವಾರ ವಿದ್ಯಾಶಂಕರಾನಂದ ಸ್ವಾಮಿಗಳು ದೊಡ್ಮನೆಗೆ ಎಂಟ್ರಿಕೊಟ್ಟಿದ್ದು ಸ್ಪರ್ಧಿಗಳ ಭವಿಷ್ಯ ಹಾಗೂ ಪೂರ್ವಪರಗಳ ಬಗ್ಗೆ ಹೇಳಿದ್ದಾರೆ. ಈ ವೇಳೆ ಡ್ರೋಣ್ ಪ್ರತಾಪ್(Drone pratap) ಬಗ್ಗೆ ಅಚ್ಚರಿ ಭವಿಷ್ಯ ನುಡಿದಿದ್ದಾರೆ.

ಹೌದು, ಕುಟುಂಬಸ್ಥರ ಪ್ರೀತಿಯೊಂದಿಗೆ ಕರ್ನಾಟಕದ ಜನತೆಯ ಪ್ರೀತಿಯನ್ನು ಮರಳಿ ಪಡೆಯುವ ಉತ್ಸಾಹದಲ್ಲಿದ್ದ ಪ್ರತಾಪ್‌ ಆಸೆಗೆ ಬರ ಸಿಡಿಲೊಂದು ಎರಗಿದೆ. ಅದೇನೆಂದರೆ ಮನೆಗೆ ಎಂಟ್ರಿಕೊಟ್ಟು ಎಲ್ಲರ ಭವಿಷ್ಯ ಹೇಳುತ್ತಿರುವ ವಿದ್ಯಾಶಂಕರಾನಂದ ಸ್ವಾಮಿಗಳು ಪ್ರತಾಪ್ ಬಳಿ ‘ಈ ವಿಚಾರ ಹೇಳುವುದಕ್ಕೆ ನನಗೆ ಸಂಕಟವಾಗುತ್ತಿದೆ. ಕುಟುಂಬದಿಂದ ದೂರವೇ ಇರಬೇಕಾಗುತ್ತದೆ. ಕುಟುಂಬದ ಜೀವನ ಅಷ್ಟು ಸರಿ ಇಲ್ಲ. ದೂರ ಇದ್ದು ದೂಪವಾಗ್ತೀಯೋ ಹತ್ತಿರ ಹೋಗಿ ಹೇಸಿಗೆ ಆಗ್ತೀಯೋ ನಿನಗೆ ಬಿಟ್ಟಿದ್ದು’ ಎಂದು ಖಡಕ್ಕಾಗಿ ಹೇಳಿದ್ದಾರೆ. ಅವರ ಮಾತುಗಳನ್ನು ಕೇಳಿ ಪ್ರತಾಪ್ ಕಣ್ಣುಗಳಲ್ಲಿ ಕಣ್ಣೀರು ತುಂಬಿ ಹರಿದಿದೆ.

ಇದನ್ನು ಓದಿ: Vastu Shastra About Eating Direction: ಅಪ್ಪಿ ತಪ್ಪಿಯೂ ಈ ದಿಕ್ಕಿನಲ್ಲಿ ಮುಖ ಮಾಡಿ ಊಟ ಮಾಡಬೇಡಿ!! ಸಾವಿನ ಮನೆಗೆ ಆಹ್ವಾನ ಪಡೆಯಬಹುದು ಎಚ್ಚರ!!

ಆದದ್ದು ಎಲ್ಲಾ ಆಯಿತು, ಓಹ್ ಎಲ್ಲವೂ ಸರಿಯಾಯಿತು, ಬಿಗ್ ಬಾಸ್ ಮನೆಯಿಂದ ಹೋಗುವಾಗ ಕರ್ನಾಟಕದ ಜನತೆಯದಷ್ಟೇ ಅಲ್ಲ, ಕುಟುಂಬಸ್ಥರ ಪ್ರೀತಿಯನ್ನು ಮರಳಿ ಪಡೆಯುವ ಉತ್ಸಾಹದಲ್ಲಿದ್ದ ಪ್ರತಾಪ್‌ ಆಸೆಗೆ ಶ್ರೀ ವಿದ್ಯಾಶಂಕರಾನಂದ ಸರಸ್ವತಿ ಗುರೂಜಿಯ ಭವಿಷ್ಯ ಬರ ಸಿಡಿಲಂತೆ ಸಂಭವಿಸಿದೆ. ಸದ್ಯ ಈ ಪ್ರೋಮೋ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗ್ತಿದೆ.

You may also like

Leave a Comment