Home » Mangaluru News: ಲೋಕಸಭೆ ಚುನಾವಣೆ; ಮಂಗಳೂರು ಪೊಲೀಸರಿಂದ 19 ರೌಡಿಶೀಟರ್‌ಗಳ ಗಡಿಪಾರು

Mangaluru News: ಲೋಕಸಭೆ ಚುನಾವಣೆ; ಮಂಗಳೂರು ಪೊಲೀಸರಿಂದ 19 ರೌಡಿಶೀಟರ್‌ಗಳ ಗಡಿಪಾರು

1 comment
Mangaluru News

Mangaluru Police: ಲೋಕಸಭೆ ಚುನಾವಣೆ ಸಂದರ್ಭ ಶಾಂತಿ ಸುವ್ಯವಸ್ಥೆ ಕಾಪಾಡುವ ಕಾರಣದಿಂದ ಮಂಗಳೂರು ಪೊಲೀಸ್‌ ಕಮಿಷನರೇಟ್‌ ವ್ಯಾಪ್ತಿಯ 19 ರೌಡಿ ಶೀಟರ್‌ಗಳ ವಿರುದ್ಧ ಗಡಿಪಾರು ಆದೇಶವನ್ನು ಅನುಪಮ್‌ ಅಗರವಾಲ್‌ ಮಾಡಿದ್ದಾರೆ. ಏಳು ಮಂದಿಯನ್ನು ಇತ್ತೀಚೆಗಷ್ಟೇ ಬೇರೆ ಬೇರೆ ಜಿಲ್ಲೆಗಳಿಗೆ ಗಡಿಪಾರು ಮಾಡಲಾಗಿದ್ದು, ಅದರ ಮುಂದುವರಿದ ಭಾಗವಾಗಿ ಈ ಕ್ರಮ ಮಾಡಲಾಗಿದೆ.

ಇದನ್ನೂ ಓದಿ: Viral Video: ಬಿಯರ್‌ಗೆ ರೇಟ್‌ ಜಾಸ್ತಿ ಆಯ್ತು ಎಂದು ಸತ್ತೋಗ್ತೀನಿ ಅಂತ ಮರವೇರಿ ಕೂತ ವ್ಯಕ್ತಿ

ಮೂಡುಬಿದಿರೆಯ ಪಂಟಿಹಾಳದ ಆತೂರ್ ನಸೀಬ್ (40),ಬಜ್ಪೆಯ ಮಹಮದ್ ಸಫ್ವಾನ್ ಅಲಿಯಾಸ್ ಸಫ್ವಾನ್ (28), ಬೋಂದೆಲ್‌ನ ಜಯೇಶ್‌ ಅಲಿಯಾಸ್‌ ಸಚ್ಚು (28),ಪೆದಮಲೆ ಮೂಲದ ವರುಣ್ ಪೂಜಾರಿ ಅಲಿಯಾಸ್ ವರುಣ್ (30),ಕೋಡಿಕಲ್‌ನ ಮೊಹಮ್ಮದ್ ಅಜೀಜ್ ಅಲಿಯಾಸ್ ಕರಿ ಅಜೀಜ್ (40), ಉಳಿದಂತೆ, ಅಬ್ದುಲ್ ಇಶಾಮ್ ಅಲಿಯಾಸ್ ಹಿಶಾಮ್, ಇಡ್ಯಾ ಮೂಲದ ಕಾರ್ತಿಕ್ ಶೆಟ್ಟಿ ಅಲಿಯಾಸ್ ಕಾರ್ತಿಕ್ (28), ಕೈಕಂಬದ ದೀಕ್ಷಿತ್ ಪೂಜಾರಿ (23), ಕೃಷ್ಣಾಪುರ 4ನೇ ಬ್ಲಾಕ್‌ನ ಲಕ್ಷ್ಮೀಶ ಅಲಿಯಾಸ್ ಲಕ್ಷ್ಮೀಶ ಉಳ್ಳಾಲನನ್ನೂ ಗಡಿಪಾರು ಮಾಡಲಾಗಿದೆ.

ಇದನ್ನೂ ಓದಿ: Flower Price: ಹೂ ಬೆಳೆಗೂ ತಟ್ಟಿದ ಬಿಸಿಲ ಝಳ : ಗಗನಕ್ಕೇರುತ್ತಿದೆ ಹೂವಿನ ದರ

ಬೋದಂತಿಲದ ಕಿಶೋರ್ ಸನಿಲ್ (36), ಉಳ್ಳಾಲದ ಕೋಡಿಮೇನ್‌ನ ಹಸೈನಾರ್ ಸೈಯದ್ ಅಲಿ (38), ಅಬ್ದುಲ್ ಜಲೀಲ್ ಅಲಿಯಾಸ್. ಕುದ್ರೋಳಿಯ ಜಲೀಲ್ (28), ಬೋಳೂರಿನ ರೋಷನ್ ಕಿಣಿ (18), ಕಸಬಾ ಬೆಂಗ್ರೆಯ ಅಹ್ಮದ್ ಸಿನಾನ್ (21), ಕಡೆಕಾರ್ ನಿವಾಸಿ ನಿತೇಶ್ ಕುಮಾರ್ (28), ಕುತ್ತಡ್ಕದ ಗುರುಪ್ರಸಾದ್ (38), ಕುತ್ತಡ್ಕದ ಭರತ್ ಪೂಜಾರಿ (31), ಜೆಪ್ಪು ಕುಡುಪಾಡಿ ನಿವಾಸಿ ಸಂದೀಪ್ ಶೆಟ್ಟಿ (37) ಇಷ್ಟು ಮಂದಿಯನ್ನು ಗಡಿಪಾರು ಮಾಡಲಾಗಿದೆ ಎಂದು ಆಯುಕ್ತರು ತಿಳಿಸಿದ್ದಾರೆ ಎಂದು ಟಿವಿ9 ವರದಿ ಮಾಡಿದೆ.

You may also like

Leave a Comment