Home » Actor Darshan: ಪರಪ್ಪನ ಅಗ್ರಹಾರ ಜೈಲಿನಲ್ಲಿ ನಟ ದರ್ಶನ್‌ಗೆ ಫುಲ್ ಖುಷ್! ಕಾರಣ ಏನು ಗೊತ್ತಾ

Actor Darshan: ಪರಪ್ಪನ ಅಗ್ರಹಾರ ಜೈಲಿನಲ್ಲಿ ನಟ ದರ್ಶನ್‌ಗೆ ಫುಲ್ ಖುಷ್! ಕಾರಣ ಏನು ಗೊತ್ತಾ

0 comments
Actor Darshan

Actor Darshan: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ ಪರಪ್ಪನ ಅಗ್ರಹಾರ ಜೈಲು ಸೇರಿ ಹಲವು ವಾರಗಳೇ ಕಳೆದವು. ಆದ್ರೆ ಇಷ್ಟು ದಿನಗಳಲ್ಲಿ ದರ್ಶನ್‌  (Actor Darshan) ಜೈಲಿನಲ್ಲಿ ಯಾರ ಬಳಿಯೂ ಮಾತನಾಡದೇ ಮೌನವಾಗಿದ್ದರು. ಯಾರೊಂದಿಗೂ ಮಾತನಾಡಲು ಇಷ್ಟ ಪಡುತ್ತಿರಲಿಲ್ಲ, ಸದ್ಯ ಒಂಟಿತನದ ಕಡೆಗೆ ವಾಲಿದ ದರ್ಶನ್ ಅವರಲ್ಲಿ ಇದೀಗ ಹೊಸ ಚೈತನ್ಯ ಮೂಡಿದೆ. ಈ ಚೈತನ್ಯಕ್ಕೆ ಅವರ ಹೊಸ ನಂಟು ಒಂದು ಕಾರಣ ಆಗಿದೆ.

ಹೌದು, ಇದೀಗ ದರ್ಶನ್ ಅವರಿಗೆ ಜೈಲಿನಲ್ಲಿ ಹೊಸ ಸ್ನೇಹಿತರೊಬ್ಬರು ಸಿಕ್ಕಿದ್ದಾರೆ ಎಂದು ತಿಳಿದುಬಂದಿದೆ. ಈ ಕಾರಣದಿಂದ ಅವರು ತುಂಬಾ ಖುಷಿಯಾಗಿ ಇದ್ದಾರೆ. ಹಾಗಾದರೆ ಆ ಸ್ನೇಹಿತ ಯಾರು ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

ದರ್ಶನ್ ತಪ್ಪು ಮಾಡಲಿ, ಅಥವಾ ಮಾಡದೇ ಇರಲಿ. ಕೆಲವೊಮ್ಮೆ ವ್ಯಕ್ತಿಯ ಸೋಲು ಗೆಲುವಿಗೆ ಸಹವಾಸ ದೋಷವು ಕಾರಣ ಆಗುತ್ತೆ ಅನ್ನೋದು ಅಭಿಮಾನಿಗಳ ಅಭಿಪ್ರಾಯ. ಅದೇನೇ ಇರಲಿ ಪಶ್ಚಾತಾಪ ಸ್ಥಿತಿಯಲ್ಲಿ ಮೌನಿ ಆಗಿರುವ ದರ್ಶನ್ ಇದೀಗ ಆಶ್ಚವೆಂಬಂತೆ ಅವರು ಖುಷಿಯಾಗಿ ಇದ್ದು, ಹೊಸ ಸ್ನೇಹ ಬೆಳೆಸಿಕೊಂಡಿದ್ದಾರೆ. ಹೌದು, ಆ ಸ್ನೇಹಿತ ಬೇರೆ ಯಾರು ಅಲ್ಲ. ಅದು ಕಥೆ & ಕಾದಂಬರಿಯ ಪುಸ್ತಕಗಳೇ ಆಗಿವೆಯಂತೆ.

ಹೌದು, ಪುಸ್ತಕ ಕ್ಕಿಂತಲೂ ಒಳ್ಳೆಯ ಗೆಳೆಯ ಬೇರೊಬ್ಬರು ಇರಲು ಸಾಧ್ಯವಿಲ್ಲ. ಅಂತೆಯೇ ನಟ ದರ್ಶನ್‌ ಜೈಲಿನಲ್ಲಿ ಹೆಚ್ಚು ಸಮಯವನ್ನು ಬುಕ್‌ಗಳ ಜೊತೆ ಕಳೆಯುತ್ತಿದ್ದಾರೆ ಎನ್ನುವ ಮಾಹಿತಿ ತಿಳಿದುಬಂದಿದೆ. ಪ್ರತಿ ದಿನ ದರ್ಶನ್‌ ಅವರು ಗ್ರಂಥಾಲಯದಿಂದ ಬೇರೆ, ಬೇರೆ ಬುಕ್ ಪಡೆಯುತ್ತಿದ್ದಾರಂತೆ. ಈ ಪುಸ್ತಕ ಸ್ನೇಹದಿಂದ ಜೈಲಿಗೆ ಬರುವ ವಾರ್ಡನ್‌ಗಳ ಜೊತೆ ನಗು ನಗುತ್ತಾ ದರ್ಶನ್‌ ಕಾಲ ಕಳೆಯುತ್ತಿದ್ದಾರೆ ಎನ್ನುವ ಸಂತಸದ ಮಾಹಿತಿಯೊಂದು ಲಭ್ಯವಾಗಿದೆ.

Dengue Recovery Diet: ಡೆಂಘಿ ಜ್ವರ ಅಪಾಯ ತಪ್ಪಿಸಲು ತಪ್ಪದೇ ಈ ಆಹಾರ ಸೇವಿಸಿ! ಇದು ನಿಮ್ಮ ರಕ್ತದಲ್ಲಿ ಪ್ಲೇಟ್‌ಲೆಟ್ ಸಂಖ್ಯೆ ಹೆಚ್ಚಿಸುತ್ತೆ!

You may also like

Leave a Comment