Home » Pest in Tuvar Dal: ಸಾವಯವ ವಿಧಾನದಿಂದ ತೊಗರಿಯಲ್ಲಿ ಕೀಟ ನಿರ್ವಹಣೆ ಹೇಗೆ?

Pest in Tuvar Dal: ಸಾವಯವ ವಿಧಾನದಿಂದ ತೊಗರಿಯಲ್ಲಿ ಕೀಟ ನಿರ್ವಹಣೆ ಹೇಗೆ?

0 comments

Pest in Tuvar Dal: ತೊಗರಿ ಕಲ್ಯಾಣ ಕರ್ನಾಟಕದ(Kalayana Karnataka) ಪ್ರಮುಖ ವಾಣಿಜ್ಯ ಬೆಳೆಯಾಗಿದೆ(Commercial crop). ಆದರೆ ಇದನ್ನು ದೇಶದಾದ್ಯಂತ ಆಹಾರ ಪದಾರ್ಥವಾಗಿ(Food) ಹೆಚ್ಚಿನ ಜನ ಬಳಸುತ್ತಾರೆ. ತೊಗರಿ ಬೆಳೆಯು(Tuvar Dal) ಈಗ ಮೊಗ್ಗು ಬಿಡುವ ಹಂತದಲ್ಲಿದೆ. ಈ ಸಂದರ್ಭದಲ್ಲಿ ಪ್ರಸಕ್ತ ವಾತಾವರಣದಿಂದಾಗಿ ಕೀಟ ಬಾಧೆ(Pest) ಹೆಚ್ಚಾಗುವ ಸಾಧ್ಯತೆಯಿದೆ. ತೊಗರಿಯನ್ನು ಹೆಚ್ಚಾಗಿ ಅಡುಗೆ ಮಾಡಲು ಬಳಸುವುದರಿಂದ ಸಾವಯವ(Organic) ಕ್ರಮಗಳನ್ನಳವಡಿಸಿ ಕೀಟ ಹತೋಟಿ(Pest control) ಮಾಡುವುದು ಉತ್ತಮ ಪದ್ಧತಿ. ಈ ಕುರಿತು ವಿಜಯಪುರ ಕೃಷಿ ಮಹಾವಿದ್ಯಾಲಯ ಸಹ ವಿಸ್ತರಣಾ ನಿರ್ದೇಶಕ ಡಾ. ರವೀಂದ್ರ ಬೆಳ್ಳಿ ಉಪಯುಕ್ತ ಮಾಹಿತಿ ನೀಡಿದ್ದಾರೆ.

– ಮೆಣಸಿನಕಾಯಿ ಮತ್ತು ಬೆಳ್ಳುಳ್ಳಿ ಕಷಾಯ ತಯಾರಿಸುವ ವಿಧಾನ: 1.0 ಕೆಜಿ. ಬೆಳ್ಳುಳ್ಳಿಯನ್ನು 100 ಮಿ.ಲೀ ಸೀಮೆ ಎಣ್ಣೆಯಲ್ಲಿ ನೆನೆಸಿ, ರುಬ್ಬಿ, 0.8 ಲೀಟರ್ ದ್ರಾವಣ ಹಾಗೂ 2 ಕೆಜಿ ಮೆಣಸಿನಕಾಯಿಯನ್ನು ಚೆನ್ನಾಗಿ ರುಬ್ಬಿ 1.2 ಲೀಟರ್ ದ್ರಾವಣ ತಯಾರಿಸಬೇಕು.

– ಎರಡೂ ದ್ರಾವಣಗಳನ್ನು 400 ಲೀಟರ್ ನೀರಿನಲ್ಲಿ ಬೆರೆಸಿ, ಒಂದು ಎಕರೆ ಕ್ಷೇತ್ರದಲ್ಲಿ ಬೆಳೆಗೆ ಸಿಂಪಡಿಸಬೇಕು.

– ಬೇವಿನ ಬೀಜದ ಕಷಾಯ ತಯಾರಿಸುವ ವಿಧಾನ: 20 ಕೆಜಿ ಪುಡಿ ಮಾಡಿದ ಬೇವಿನ ಬೀಜವನ್ನು ಬಟ್ಟೆಯಲ್ಲಿ ಕಟ್ಟಿ ನೀರಿನಲ್ಲಿ 10 ಗಂಟೆಗಳ ಕಾಲ ನೆನೆಸಿಡಬೇಕು. ನಂತರ ಸೊಸಿಕೊಂಡ ಈ ದ್ರಾವಣಕ್ಕೆ 100 ಗ್ರಾಂ. ಸಾಬೂನಿನ ಪುಡಿಯನ್ನು ಬೆರೆಸಿ, 400 ಲೀಟರ್ ನೀರಿನಲ್ಲಿ ಬೆರೆಸಿ ಒಂದು ಎಕರೆ ಕ್ಷೇತ್ರದಲ್ಲಿನ ಬೆಳೆಗೆ ಸಿಂಪಡಿಸಬೇಕು. ಈ ರೀತಿ ಮಾಡುವುದರಿಂದ ತೊಗರಿಗೆ ಬರುವ ಕೀಟಗಳನ್ನು ಪರಿಣಾಮಕಾರಿಯಾಗಿ ಹತೋಟಿ ಮಾಡಬಹುದು.

ಇಳುವರಿ ಹೆಚ್ಚಿಸಲು, ಬೆಳೆಯ ಬೆಳವಣಿಗೆ ಹೆಚ್ಚಿಸಿ ಹೂ ಮತ್ತು ಕಾಯಿ ಉದುರುವುದನ್ನು ತಡೆಗಟ್ಟಲು ಲಘು ಪೋಷಕಾಂಶಗಳ ಬಳಕೆ ಮಾಡಬೇಕು. ಇದಕ್ಕಾಗಿ ಪಲ್ಸ್ ಬೂಸ್ಟರ್ ಮತ್ತು ಪಲ್ಸ್ ಮ್ಯಾಜಿಕ್ ಸಿಂಪಡಿಸಬೇಕು.

You may also like

Leave a Comment