Home » Duniya Vijay: ನಟ ದುನಿಯಾ ವಿಜಿಯಿಂದ ಜೈಲಿನಿಂದ ರಿಲೀಸ್‌ ಆಗಿದ್ದ ವ್ಯಕ್ತಿಯಿಂದ ಡಬಲ್‌ ಮರ್ಡರ್‌

Duniya Vijay: ನಟ ದುನಿಯಾ ವಿಜಿಯಿಂದ ಜೈಲಿನಿಂದ ರಿಲೀಸ್‌ ಆಗಿದ್ದ ವ್ಯಕ್ತಿಯಿಂದ ಡಬಲ್‌ ಮರ್ಡರ್‌

0 comments

Duniya Vijay: ಸ್ಯಾಂಡಲ್‌ವುಡ್‌ ನಟ ದುನಿಯಾ ವಿಜಯ್‌ ಅವರ ಸಹಾಯದಿಂದ ಜೈಲಿನಿಂದ ಆಚೆ ಬಂದಿದ್ದ ವ್ಯಕ್ತಿಯೋರ್ವ ಜೋಡಿ ಕೊಲೆಯೊಂದರ ಪ್ರಕರಣದಲ್ಲಿ ಮತ್ತೆ ಜೈಲು ಸೇರಿರುವ ಘಟನೆಯೊಂದು ನಡೆದಿದೆ.

ನವೆಂಬರ್‌ 8 ರ ರಾತ್ರಿ ಬೆಂಗಳೂರಿನ ಹೊರವಲಯದಲ್ಲಿ ರಾತ್ರಿ ಜೋಡಿಕೊಲೆ ನಡೆದಿತ್ತು. ಬಸ್‌ನಲ್ಲಿ ಕೆಲಸ ಮಾಡುತ್ತಿದ್ದ ನಾಗೇಶ್‌ (51) ಮತ್ತು ಮಂಜುನಾಥ್‌ (50) ಎನ್ನುವವರನ್ನು ಹತ್ಯೆ ಮಾಡಲಾಗಿತ್ತು. ಈ ಘಟನೆ ಕುರಿತು ದೂರು ದಾಖಲಿಸಿಕೊಂಡ ಪೊಲೀಸರು ಸುರೇಶ್‌ ಎಂಬಾತನನ್ನು ಬಂಧನ ಮಾಡಿದ್ದಾರೆ.

ನಂತರ ಈ ಸುರೇಶ್‌ ಯಾರು ಎನ್ನುವುದರ ಹಿನ್ನೆಲೆ ಬಹಿರಂಗವಾಗಿದೆ.

ಸುರೇಶ್‌ ಈ ಹಿಂದೆ ಕೊಲೆ ಹಾಗೂ ಅತ್ಯಾಚಾರ ಪ್ರಕರಣಕ್ಕೆ ಸಂಬಂಧ ಪಟ್ಟಂತೆ 10 ವರ್ಷ ಜೈಲು ಶಿಕ್ಷೆ ಅನುಭವಿಸಿದ್ದ. ಆದರೆ ಈತನಿಗೆ ಶ್ಯೂರಿಟಿ ಹಣ ನೀಡಲು ಯಾರೂ ಕೂಡಾ ಬಂದಿರದ ಕಾರಣ ಜೈಲಿನಲ್ಲೇ ಇದ್ದ. ಈ ಸಮಯದಲ್ಲಿ ನಟ ದುನಿಯಾ ವಿಜಯ್‌ ಅವರು ಕೆಲವೊಂದು ಅಪರಾಧಿಗಳಿಗೆ ತಲಾ 3 ಲಕ್ಷದಂತೆ ಶ್ಯೂರಿಟಿ ಹಣ ಕೊಟ್ಟು ಜೈಲಿನಿಂದ ಬಿಡುಗಡೆ ಮಾಡಿಸಿದ್ದರು.

ಸುರೇಶ್‌ ಇವರಲ್ಲಿ ಒಬ್ಬನಾಗಿದ್ದ. ಜೈಲಿನಿಂದ ಹೊರ ಬಂದ ಸುರೇಶ್‌ ಮಾರ್ಕೆಟ್‌ವೊಂದರಲ್ಲಿ ಕೊತ್ತಂಬರಿ ಸೊಪ್ಪು ಮಾರಾಟ ಮಾಡುತ್ತಾ ಜೀವನ ಕಳೆಯುತ್ತಿದ್ದ. ಮಾರ್ಕೆಟ್‌ ಪಕ್ಕದಲ್ಲಿ ನಾಗೇಶ್‌ ಮತ್ತು ಮಂಜುನಾಥ್‌. ʼ ನೀನು ಕಳ್ಳ, ಕೊಲೆಗಾರʼ ಎಂದು ಸುರೇಶ್‌ಗೆ ಹೀಯಾಳಿಸುತ್ತಿದ್ದುದರಿಂದ ಸಿಟ್ಟುಗೊಂಡ ಸುರೇಶ್‌ ಇಬ್ಬರನ್ನೂ ಕೊಲೆ ಮಾಡಿದ್ದಾನೆ ಎಂದು ಹೇಳಲಾಗಿದೆ.

ಪೊಲೀಸರು ಸುರೇಶ್‌ನನ್ನು ಬಂಧನ ಮಾಡಿದ್ದಾರೆ.

You may also like

Leave a Comment