Home » Mangaluru: ಮಂಗಳೂರು: MRPL ಗುತ್ತಿಗೆ ಕಾರ್ಮಿಕರ ಬೇಡಿಕೆಗೆ ಗ್ರೀನ್ ಸಿಗ್ನಲ್ ನೀಡಿದ ಸಂಸದರು

Mangaluru: ಮಂಗಳೂರು: MRPL ಗುತ್ತಿಗೆ ಕಾರ್ಮಿಕರ ಬೇಡಿಕೆಗೆ ಗ್ರೀನ್ ಸಿಗ್ನಲ್ ನೀಡಿದ ಸಂಸದರು

by ಕಾವ್ಯ ವಾಣಿ
0 comments
MRPL Recruitment 2023

Mangaluru: ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಇವರ ನೇತೃತ್ವದಲ್ಲಿ, ಮಂಗಳೂರು (Mangaluru) ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ MRPL -ONGC ಕರ್ಮಚಾರಿ ಸಂಘ (ರಿ) ಇದರ MRPL ನಲ್ಲಿ ದುಡಿಯುತ್ತಿರುವ ಗುತ್ತಿಗೆ ಕಾರ್ಮಿಕರ ಕೆಲವೊಂದು ನೈಜ ಸಮಸ್ಯೆಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.

ಮುಖ್ಯವಾಗಿ ಕಾರ್ಮಿಕರಿಗೆ 21,000 ಕ್ಕಿಂತ ಮೇಲ್ಪಟ್ಟ ವೇತನ ಇದ್ದಲ್ಲಿ ಅಂತಹ ಕಾರ್ಮಿಕರಿಗೆ esic ಆರೋಗ್ಯ ಭದ್ರತೆ ಅನ್ವಹಿಸುವುದಿಲ್ಲ. ಅಂತಹ ಕಾರ್ಮಿಕರಿಗೆ ಮೆಡಿಕ್ಲೈಮ್ ಫೆಸಿಲಿಟಿ ಯನ್ನು ನಿಯಮಾನುಸಾರ ಮಾಡುವಂತೆ ಚರ್ಚೆ ನಡೆಯಿತು.

MRPL ಸ್ಪೆಷಲ್ allowance 8ವರ್ಷ ಕಳೆದರೂ ಈ ವಿಶೇಷ ಭತ್ಯೆಯನ್ನು ದ್ವಿಗುಣಗೊಳಿಸುವ ಬಗ್ಗೆ ಚರ್ಚೆ ನಡೆಸಿ MRPL ಸಂಸ್ಥೆಗೆ ವಿಶೇಷ ಭತ್ಯೆಯನ್ನು ಗುತ್ತಿಗೆ ಕಾರ್ಮಿಕರಿಗೆ ದ್ವಿಗುಣಗೊಳಿಸುವಂತೆ ಸೂಚಿಸಲಾಯಿತು. MRPL ನಲ್ಲಿ ದುಡಿಯುತ್ತಿರುವ ಕಾರ್ಮಿಕರಿಗೆ ಕೆಲಸದ ಸಮಯ ಅಥವಾ ಕಂಪನಿಯ ಹೊರಗೆ ಮೃತಪಟ್ಟ ಕುಟುಂಬಕ್ಕೆ 10 ಲಕ್ಷ ರೂಪಾಯಿ ವಿಮೆಯ ಮೊತ್ತವನ್ನು 25 ಲಕ್ಷಕ್ಕೆ ಏರಿಕೆ ಮಾಡುವಂತೆ ಎಂ ಆರ್ ಪಿ ಎಲ್ ಅಧಿಕಾರಿಗಳಿಗೆ ಸೂಚಿಸಲಾಯಿತು.

ಸಮುದ್ರ ಮಟ್ಟಕ್ಕಿಂತ 30 ಫೀಟ್ ಎತ್ತರದಲ್ಲಿ ದುಡಿಯುತ್ತಿರುವ ಗುತ್ತಿಗೆ ಕಾರ್ಮಿಕರಿಗೆ ಹೈಟ್ allowance ನೀಡುವಂತೆ ಸೂಚಿಸಲಾಯಿತು. ಕಾರ್ಮಿಕರ ಇತರ ಭದ್ರತೆಗೆ ಸಂಬಂಧಪಟ್ಟಂತೆ ವಿಶ್ರಾಂತಿ ಕೊಠಡಿ ಶೌಚಾಲಯಗಳನ್ನು ನೀಡುವಂತೆ ಚರ್ಚಿಸಲಾಯಿತು. ಈ ಮೇಲಿನ ಎಲ್ಲ ವಿಷಯಗಳನ್ನು ಕೂಲಂಕುಶವಾಗಿ ಪರಿಗಣಿಸಿ MRPL ಗೆ ಮೂರು ದಿನದಲ್ಲಿ ಲಿಖಿತ ರೂಪದ ಉತ್ತರವನ್ನು ನೀಡುವಂತೆ ಕ್ಯಾಪ್ಟನ್ ಬ್ರಿಜೇಶ್ ಚೌಟ ಆದೇಶಿಸಿದರು.

You may also like