Home » Mangaluru: ಸಾವಿರಾರು ವರ್ಷದಿಂದ ರಾಕ್ಷಸರು ಸಜ್ಜನರ ಮೇಲೆ ಆಕ್ರಮಣ-ಕಲ್ಲಡ್ಕ ಪ್ರಭಾಕರ್‌ ಭಟ್

Mangaluru: ಸಾವಿರಾರು ವರ್ಷದಿಂದ ರಾಕ್ಷಸರು ಸಜ್ಜನರ ಮೇಲೆ ಆಕ್ರಮಣ-ಕಲ್ಲಡ್ಕ ಪ್ರಭಾಕರ್‌ ಭಟ್

0 comments

Mangaluru: ಹಿಂದೂ ಕಾರ್ಯಕರ್ತ ಸುಹಾಸ್‌ ಶೆಟ್ಟಿ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖಂಡ ಡಾ.ಕಲ್ಲಡ್ಕ ಪ್ರಭಾಕರ್‌ ಅವರು, ʼ ಧರ್ಮ ದೇಶಕ್ಕಾಗಿ ಹೋರಾಟ ಮಾಡುವವರು ಕ್ಷಣ ಕ್ಷಣಕ್ಕೂ ಎಚ್ಚರವಾಗಿರಬೇಕಾದ ಪರಿಸ್ಥಿತಿ ಇದೆ. ಸಾವಿರಾರು ವರ್ಷದಿಂದ ರಾಕ್ಷಸರು ಸಜ್ಜನರ ಮೇಲೆ ಆಕ್ರಮಣ ಮಾಡುತ್ತಿದ್ದಾರೆ. ಅದು ಈಗಲೂ ಮುಂದುವರಿದಿದೆ. ಇದರ ವಿರುದ್ಧ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಹೇಳಿದ್ದಾರೆ.

ಫಾಜಿಲ್‌ ಕೊಲೆಯಲ್ಲಿ ಸುಹಾಸ್‌ ಅಪರಾಧಿ ಎಂದು ಇನ್ನೂ ಸಾಬೀತಾಗಿಲ್ಲ ಎಂದು ಪ್ರಭಾಕರ್‌ ಭಟ್‌ ಹೇಳಿದರು.

ಸುಹಾಸ್‌ ಶೆಟ್ಟಿ ಮೃತ ದೇಹವನ್ನು ಎಜೆ ಆಸ್ಪತ್ರೆಯ ಶವಾಗಾರದಲ್ಲಿ ಇಡಲಾಗಿದ್ದು, ಹಿಂದೂ ಸಂಘಟನೆಗಳ ಕಾರ್ಯಕರ್ತರು ಜಮಾಯಿಸಿದ್ದು, ಮೃತದೇಹವನ್ನು ಬಂಟ್ವಾಳಕ್ಕೆ ರವಾನೆ ಮಾಡಲು ಆಂಬುಲೆನ್ಸ್‌ ಸಜ್ಜಾಗಿದ್ದು. ಸ್ಥಳದಲ್ಲಿ ಆರ್‌ಎಸ್‌ಎಸ್‌ ಮುಖಂಡ ಕಲ್ಲಡ್ಕ ಪ್ರಭಾಕರ್‌ ಭಟ್‌, ಸತೀಶ್‌ ಕುಂಪ, ಉಮಾನಾಥ ಕೋಟ್ಯಾನ್‌, ಡಾ.ಭರತ್‌ ಶೆಟ್ಟಿ, ಶರಣ್‌ ಪಂಪ್‌ವೆಲ್‌ ಇದ್ದಾರೆ.

You may also like