6
Bangalore Stampede: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತ ದುರಂತದ ಕುರಿತು ಮುಖ್ಯಮಂತ್ರಿ ತೀವ್ರ ಬೇಸರ ವ್ಯಕ್ತಪಡಿಸಿದ್ದು, ಈ ಘಟನೆ ಕುರಿತು ಸ್ವಲ್ಪ ಮಾಹಿತಿ ಇದ್ದರೂ ವಿಧಾನಸೌಧದಲ್ಲಿ ಕಾರ್ಯಕ್ರಮ ಮಾಡುತ್ತಲೇ ಇರಲಿಲ್ಲ ಎಂದು ಹೇಳಿದ್ದಾರೆ.
ಈ ಕುರಿತು ಆಪ್ತಳ ಬಳಿ ಹೇಳಿ ತಮ್ಮ ಬೇಸರ ವ್ಯಕ್ತಪಡಿಸಿದ್ದಾರೆ ಸಿಎಂ ಎನ್ನಲಾಗಿದೆ. ಕಾಲ್ತುಳಿತ ಕುರಿತು ಅಧಿಕಾರಿಗಳು ತಡವಾಗಿ ಹೇಳಿದರು. ಸಾವಿನ ವಿಚಾರ ಗೊತ್ತಿದ್ದರೆ ವಿಧಾನಸೌಧದಲ್ಲಿ ಅಭಿನಂದನಾ ಸಮಾರಂಭ ಮಾಡುತ್ತಿರಲಿಲ್ಲ. ಕಾರ್ಯಕ್ರಮದ ಸ್ಟೇಜ್ ಕೂಡಾ ನಾನು ಹತ್ತುತ್ತಿರಲಿಲ್ಲ ಎಂದು ಹೇಳಿದ್ದಾರೆ.
