3
Mangaluru: ಪಡುಬಿದ್ರಿಯ ಪಲಿಮಾರಿನಲ್ಲಿ ಮಹಮ್ಮದ್ ಕಬೀರ್ ಎಂಬಾತ ಚಪ್ಪಲಿ ಖರೀದಿಸಲು ಪೇಟೆಗೆ ಹೋಗಿ ಬರುವುದಾಗಿ ಹೇಳಿ ಮತ್ತೆ ಮನೆಗೆ ಬಾರದೆ ನಾಪತ್ತೆಯಾಗಿರುವ ಬಗ್ಗೆ ದೂರು ದಾಖಲು ಆಗಿದೆ.
ಬಿಳಿ ಮೈಬಣ್ಣ, ತೆಳ್ಳನೆ ಶರೀರ ಇವರದ್ದಾಗಿದ್ದು ತುಳು, ಬ್ಯಾರಿ, ಕನ್ನಡ ಭಾಷೆಯನ್ನು ಅರಿತಿದ್ದಾರೆ. ಕಾಣೆಯಾದ ದಿನ ಇವರು ಬಿಳಿ ಶರ್ಟು ಹಾಗೂ ಪ್ಯಾಂಟ್ ಧರಿಸಿದ್ದರು.
ಇವರ ಬಗ್ಗೆ ಏನಾದರೂ ಮಾಹಿತಿ ಕಂಡುಬಂದಲ್ಲಿ ಪಡುಬಿದ್ರಿ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಪೊಲೀಸರು ತಿಳಿಸಿದ್ದಾರೆ.
