Home » Pawan Kalyan : ಧರ್ಮಸ್ಥಳ ಪರ ನಿಂತ ಆಂಧ್ರ DCM ಪವನ್ ಕಲ್ಯಾಣ್ – ಈ ದಿನ ಕ್ಷೇತ್ರಕ್ಕೆ ಭೇಟಿ, ದೇವಾಲಯದ ಎದುರು ವಿಶೇಷ ಆರತಿ ಪೂಜೆ!!

Pawan Kalyan : ಧರ್ಮಸ್ಥಳ ಪರ ನಿಂತ ಆಂಧ್ರ DCM ಪವನ್ ಕಲ್ಯಾಣ್ – ಈ ದಿನ ಕ್ಷೇತ್ರಕ್ಕೆ ಭೇಟಿ, ದೇವಾಲಯದ ಎದುರು ವಿಶೇಷ ಆರತಿ ಪೂಜೆ!!

0 comments

Pawan Kalyan: ಧರ್ಮಸ್ಥಳ ಪ್ರಕರಣ ದೇಶಾದ್ಯಂತ ಸಂಚಲನ ಸೃಷ್ಟಿಸಿದ್ದು, ಸಾಕಷ್ಟು ವಿವಾದಗಳಿಂದ ಕೂಡಿದೆ. ಇದೀಗ ಇದೆಲ್ಲವೂ ಕೇವಲ ಷಡ್ಯಂತ್ರ ಎಂದು ತಿಳಿಯುತ್ತಿದ್ದಂತೆ ರಾಜಕೀಯ ನಾಯಕರು ಧರ್ಮಸ್ಥಳ ಹಾಗೂ ವೀರೇಂದ್ರ ಹೆಗಡೆಯವರ ಪರ ಧ್ವನಿ ಎತ್ತಿ ನಿರಂತರವಾಗಿ ಕ್ಷೇತ್ರಕ್ಕೆ ಭೇಟಿ ನೀಡುತ್ತಿದ್ದಾರೆ. ಅಂತೆಯೇ ಇದೀಗ ಆಂಧ್ರಪ್ರದೇಶದ ಡಿಸಿಎಂ ಪವನ್ ಕಲ್ಯಾಣ್ ಧರ್ಮಸ್ಥಳದ ಪರ ನಿಂತಿದ್ದು, ಕ್ಷೇತ್ರದಲ್ಲಿ ವಿಶೇಷ ಆರತಿ ಪೂಜೆ ನೆರವೇರಿಸಲಿದ್ದಾರೆ.

ಹೌದು, ಆಂಧ್ರ ಪ್ರದೇಶದ ಉಪ ಮುಖ್ಯಮಂತ್ರಿ ಮತ್ತು ಸ್ಟಾರ್ ನಟರಾಗಿರುವ ಪವನ್ ಕಲ್ಯಾಣ್ ಅವರು ಸೆಪ್ಟೆಂಬರ್ 11 ರಂದು ಧರ್ಮಸ್ಥಳ ಕ್ಷೇತ್ರಕ್ಕೆ ಭೇಟಿ ನೀಡಲಿದ್ದಾರೆ. ಧರ್ಮಸ್ಥಳದ ಪರವಾಗಿ ನಿಲುವು ಪ್ರಕಟಿಸಲೆಂದೇ ಸೆಪ್ಟೆಂಬರ್ 11 ರಂದು ಸಂಜೆ ಐದು ಗಂಟೆ ವೇಳೆಗೆ ಪವನ್ ಕಲ್ಯಾಣ್ ಅವರು ಧರ್ಮಸ್ಥಳಕ್ಕೆ ಆಗಮಿಸಲಿದ್ದು, ದೇವಾಲಯದಲ್ಲಿ ವಿಶೇಷ ಪೂಜೆಯನ್ನು ಮಾಡಿಸಲಿದ್ದಾರೆ. ಅದೇ ದಿನ ದೇವಾಲಯದ ಮುಂಭಾಗ ಆರತಿ ಸೇವೆಯನ್ನು ಸಹ ಪವನ್ ಕಲ್ಯಾಣ್ ಮಾಡಲಿದ್ದಾರೆ.

ಇದನ್ನೂ ಓದಿ;Nepala: ನೇಪಾಳದಲ್ಲಿ ಪ್ರಧಾನಿ ನಿವಾಸಕ್ಕೆ ಬೆಂಕಿ: ರಾಜೀನಾಮೆ ಸಲ್ಲಿಸಿದ ಓಲಿ?!

ಅಂದಹಾಗೆ ಪವನ್ ಕಲ್ಯಾಣ್ ಅವರು ಜನಸೇನಾ ಪಕ್ಷದ ಸ್ಥಾಪಕರಾಗಿದ್ದು, ಪ್ರಸ್ತುತ ಟಿಡಿಪಿ ಮತ್ತು ಬಿಜೆಪಿ ಜೊತೆ ಮೈತ್ರಿ ಸರ್ಕಾರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹಿಂದಿನಿಂದಲೂ ಹಿಂದುಪರ ನಿಲುವುಗಳನ್ನು ತಾಳಿಕೊಂಡಿರುವ ಅವರು, ತಿರುಪತಿ ಪ್ರಸಾದದಲ್ಲಿ ದನದ ಕೊಬ್ಬು ಪತ್ತೆಯಾದಾಗ ತಿರುಪತಿಗೆ ತೆರಳಿ ಸ್ವಚ್ಛತಾ ಕಾರ್ಯದಲ್ಲಿ ಭಾಗಿಯಾಗಿದ್ದನ್ನು ನೆನಪಿಸಿಕೊಳ್ಳಬಹುದು.

You may also like