11
ಢಾಕಾ: ಇತ್ತೀಚಿನ ರಾಜಕೀಯ ಅಶಾಂತಿಯ ನಡುವೆ ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ದಾಳಿ ಹೆಚ್ಚುತ್ತಿವೆ. ಈ ಹಿಂದೆ ಗಲಭೆಯಲ್ಲಿ ಇಬ್ಬರು ಹಿಂದೂಗಳನ್ನು ಹತ್ಯೆ ಮಾಡಿದ್ದ ಮೂಲಭೂತವಾದಿಗಳಿಂದ ಹಿಂದೂಗಳ ಮೇಲೆ ಮತ್ತೆ ದೌರ್ಜನ್ಯ ಮುಂದುವರಿದಿದೆ.
ಕಳೆದ ಎರಡು ದಿನಗಳಿಂದ ಪಿರೋಜ್ ಪುರದ ಡುಮ್ಮಿಟೊಲಾ ಗ್ರಾಮದಲ್ಲಿ ಹಿಂದೂಗಳ ಐದು ಮನೆಗಳಿಗೆ ದುಷ್ಕರ್ಮಿಗಳ ಗುಂಪು ಬೆಂಕಿ ಹಚ್ಚಿದೆ. ಅಲ್ಲಿನ ಪರಿಸ್ಥಿತಿ ಬಿಗುವಿನಿಂದ ಕೂಡಿದೆ. ಕೆಲ ದಿನಗಳ ಹಿಂದೆ ಚಟ್ಟೋಗ್ರಾಮದಲ್ಲೂ ಹಿಂದೂಗಳಿಗೆ ಸೇರಿದ 7 ಮನೆಗಳಿಗೆ ಬೆಂಕಿ ಹಚ್ಚಲಾಗಿತ್ತು.
