Home » Kiccha Sudeep : ಹುಬ್ಬಳ್ಳಿ ವೇದಿಕೆಯಲ್ಲಿ ಯುದ್ಧ ಘೋಷಿಸಿದ್ದು ಯಾರ ವಿರುದ್ಧ? ಕೊನೆಗೂ ಮೌನ ಮುರಿದ ಕಿಚ್ಚ ಸುದೀಪ್

Kiccha Sudeep : ಹುಬ್ಬಳ್ಳಿ ವೇದಿಕೆಯಲ್ಲಿ ಯುದ್ಧ ಘೋಷಿಸಿದ್ದು ಯಾರ ವಿರುದ್ಧ? ಕೊನೆಗೂ ಮೌನ ಮುರಿದ ಕಿಚ್ಚ ಸುದೀಪ್

0 comments

Kiccha Sudeep : ಮಾರ್ಕ್ ಸಿನಿಮಾದ ಫ್ರೀ ರಿಲೀಸ್ ಕಾರ್ಯಕ್ರಮದಲ್ಲಿ ‘ನಾವು ಮಾತಿಗೆ ಬದ್ದ, ನೀವು ಯುದ್ಧಕ್ಕೆ ಸಿದ್ಧವೇ’ ಎನ್ನುವುದರ ಮುಖಾಂತರ ಕಿಚ್ಚ ಸುದೀಪ್ ಯಾರಿಗೋ ಪರೋಕ್ಷವಾಗಿ ಕೌಂಟರ್ ಕೊಟ್ಟಿದ್ದರು. ಇದು ದರ್ಶನ ಅಭಿಮಾನಿಗಳಿಗೆ ಹೇಳಿದ ಮಾತು ಎಂಬಂತೆ ಅನೇಕರು ಬಿಂಬಿಸಲಾಗಿತ್ತು. ಅಲ್ಲದೆ ದಾವಣಗೆರೆಯಲ್ಲಿ ಇದಕ್ಕೆ ವಿಜಯಲಕ್ಷ್ಮಿ ದರ್ಶನ್ ಕೂಡ ತಮ್ಮದೇ ದಾಟಿಯಲ್ಲಿ ‘ಕೆಲವರು ದರ್ಶನ್ ಹೊರಗಡೆ ಇದ್ದಾಗ ಸುಮ್ಮನೆ ಇರುತ್ತಾರೆ. ಜೈಲಿಗೆ ಹೋದಾಗ ವೇದಿಕೆ ಮೇಲೆ ಏನೇನು ಮಾತನಾಡುತ್ತಾರೆ’ ಎಂದು ಟಾಂಗ್ ನೀಡಿದ್ದರು. ಆದರೆ ಇದೀಗ ಈ ಬಗ್ಗೆ ಸ್ವತಹ ಕಿಚ್ಚ ಸುದೀಪ್ ಅವರೇ ಪ್ರತಿಕ್ರಿಯೆ ನೀಡಿದ್ದಾರೆ.

ಹುಬ್ಬಳ್ಳಿಯಲ್ಲಿ (Hubballi) ಮಾರ್ಕ್ ಸಿನಿಮಾದ ರಿಲೀಸ್ ವೇಳೆ ಕಿಚ್ಚ ಸುದೀಪ್ ಅವರು ನಾವು ಮಾತಿಗೆ ಬದ್ಧ ನೀವು ಯುದ್ಧಕ್ಕೆ ಸಿದ್ದವೇ ಎಂದು ಪ್ರಶ್ನೆಯನ್ನು ಖಡಕ್ಕಾಗಿ ಕೇಳಿದ್ದರು. ಈ ಒಂದು ಮಾತಿನಿಂದಾಗಿ ಕಿಚ್ಚ ಸುದೀಪ್ ಹಾಗೂ ನಟ ದರ್ಶನ್ ಅವರ ಅಭಿಮಾನಿಗಳಲ್ಲಿ ಸಾಕಷ್ಟು ಗೊಂದಲ ಏರ್ಪಟ್ಟಿತ್ತು. ನಟ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಅವರು ಬಹಿರಂಗವಾಗಿಯೇ ಸುದೀಪ್

 ಅವರಿಗೆ ಪರೋಕ್ಷವಾಗಿ ಟಾಂಗ್ ನೀಡಿದ್ದರು. ಇದೆಲ್ಲವನ್ನು ಗಮನಿಸುತ್ತಿದ್ದ ಸುದೀಪ್ ಅವರು ಇದೀಗ ಮೌನ ಮರಿದಿದ್ದಾರೆ.

 ಈ ಕುರಿತಾಗಿ ಮಾತನಾಡಿದ ಸುದೀಪ್ ಅವರು ಸುದೀಪ್ ಸುಮ್ನೆ ಏನೂ ಮಾತನಾಡೋದಿಲ್ಲ. ಯೋಚನೆ ಮಾಡಿಯೇ ಮಾತನಾಡ್ತಾರೆ. ಏನೋ ಮಾತನಾಡಿದ್ರೆ ಅದು ವಾಪಾಸ್ ಬರ್ತದೆ ಅನ್ನೋ ಕಲ್ಪನೆ ಕೂಡ ಇವರಿಗೆ ಇದೆ.30 ವರ್ಷದಿಂದಲೂ ಸಿನಿಮಾದಲಿದ್ದಾರೆ. ಇವರಿಗೆ ಕ್ಯಾಮರಾದ ಮುಂದೆ ಏನ್ ಮಾತಾಡ್ಬೇಕು, ಏನ್ ಮಾತಾಡ್ಬಾರ್ದು ಅಂತ ತಿಳಿಯೋದಿಲ್ವೇ? ನಮ್ಮ ಚಿತ್ರವನ್ನ ನಾವು ಉಳಿಸಲೇಬೇಕು. ಪೈರಸಿ ಅದನ್ನ ತಿಂದು ಹಾಕುತ್ತದೆ ಅಂದ್ರೆ ಯಾರು ಬಿಡ್ತಾರೆ. ನಾವಂತು ಬಿಡೋದಿಲ್ಲ. ಹುಬ್ಬಳ್ಳಿಗೆ ಹೋಗುವಾಗ ಸಿಕ್ಕ ಮಾಹಿತಿ ಆಧಾರದ ಮೇಲೇನೆ ವೇದಿಕೆ ಮೇಲೆ ಏನು ಹೇಳ್ಬೇಕು. ಹೇಗೆ ಹೇಳ್ಬೇಕು ಅಂತ ಯೋಚನೆ ಮಾಡಿದ್ದೇನೆ. ಆ ಮೇಲೇನೆ ವೇದಿಕೆ ಮೇಲೆ ಅದನ್ನ ಹೇಳಿದ್ದೇನೆ ಎಂದು ಹೇಳಿದ್ದಾರೆ. ಅಂದರೆ ತಾನು ಯುದ್ಧ ಸಾರಿದ್ದು ಪೈರೈಸಿ ವಿರುದ್ಧ ಎಂಬುದಾಗಿ ಕಿಚ್ಚ ಸುದೀಪ್ ಓಪನ್ ಆಗಿ ಇದೀಗ ಹೇಳಿಕೊಂಡಿದ್ದಾರೆ.

You may also like