Home » Jharkhand News: ರಾಮಮಂದಿರ ಉದ್ಘಾಟನೆ; ಬರೋಬ್ಬರಿ 30 ವರ್ಷಗಳ ನಂತರ ಮೌನ ವೃತ ಮುರಿಯಲಿರುವ 85 ವರ್ಷದ ಮಹಿಳೆ!

Jharkhand News: ರಾಮಮಂದಿರ ಉದ್ಘಾಟನೆ; ಬರೋಬ್ಬರಿ 30 ವರ್ಷಗಳ ನಂತರ ಮೌನ ವೃತ ಮುರಿಯಲಿರುವ 85 ವರ್ಷದ ಮಹಿಳೆ!

1 comment
Jharkhand News

Ram Temple: ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆಯು ಜನವರಿ 22ರಂದು ನಡೆಯುವ ಪ್ರಾಣ ಪ್ರತಿಷ್ಠಾ ಸಮಾರಂಭದೊಂದಿಗೆ ನೆರವೇರಲಿದೆ. ಇದೇ ಸಮಯದಲ್ಲಿ ಜಾರ್ಖಂಡ್‌ನ 85 ವರ್ಷದ ಮಹಿಳೆಯೊಬ್ಬರು ಮೂರು ದಶಕಗಳ ನಂತರ ಮೌನದ ಪ್ರತಿಜ್ಞೆಯನ್ನು ಮುರಿಯಲು ಸಿದ್ಧರಾಗಿದ್ದಾರೆ. ವಾಸ್ತವವಾಗಿ, 1992 ರಲ್ಲಿ ಬಾಬರಿ ಮಸೀದಿ ಧ್ವಂಸದ ದಿನದಂದು, ಅವರು ಮೌನವೃತ ಆರಂಭಿಸಿದ್ದು, ರಾಮ ಮಂದಿರದ ಉದ್ಘಾಟನೆಯ ನಂತರವೇ ಮೌನದ ಪ್ರತಿಜ್ಞೆಯನ್ನು ಮುರಿಯುವುದಾಗಿ ಪ್ರತಿಜ್ಞೆ ಮಾಡಿದ್ದರು. ಇದೀಗ ಆ ಸಮಯಕ್ಕೆ ಕಾಲಕೂಡಿ ಬಂದಿದೆ.

ಜಾರ್ಖಂಡ್‌ನ ಧನ್‌ಬಾದ್‌ನ ನಿವಾಸಿಯಾಗಿರುವ ಸರಸ್ವತಿ ದೇವಿ ಸೋಮವಾರ ರಾತ್ರಿ ಅಯೋಧ್ಯೆಗೆ ರಾಮ ಮಂದಿರದ ಉದ್ಘಾಟನೆಯನ್ನು ವೀಕ್ಷಿಸಲು ತೆರಳಿದ್ದಾರೆ. ಇವರು ಅಯೋಧ್ಯೆಯಲ್ಲಿ ‘ಮೌನಿ ಮಾತಾ’ ಎಂದು ಜನಪ್ರಿಯಳಾಗಿದ್ದಾಳೆ. ಸಂಕೇತ ಭಾಷೆಯ ಮೂಲಕ ಅಥವಾ ಬರವಣಿಗೆಯ ಮೂಲಕ ಕುಟುಂಬ ಸದಸ್ಯರೊಂದಿಗೆ ಸಂವಹನ ನಡೆಸುತ್ತಿದ್ದಾರೆ.

1992ರ ಡಿಸೆಂಬರ್ 6ರಂದು ಬಾಬರಿ ಮಸೀದಿ ಧ್ವಂಸವಾದ ದಿನ ಮಾತು ನಿಲ್ಲಿಸಿದ ಅಮ್ಮ, ಅಂದು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಆಗುವವರೆಗೂ ಮೌನ ವಹಿಸುವುದಾಗಿ ನನ್ನ ತಾಯಿ ಪ್ರತಿಜ್ಞೆ ಮಾಡಿದ್ದರು. ಪ್ರತಿಷ್ಠೆಯ ದಿನಾಂಕವನ್ನು ಘೋಷಿಸಿದಾಗಿನಿಂದ ಸಂತೋಷವಾಗಿದೆ” ಎಂದು ದೇವಿಯವರ ಕಿರಿಯ ಪುತ್ರ 55 ವರ್ಷದ ಹರೇ ರಾಮ್ ಅಗರ್ವಾಲ್ ಹೇಳಿದ್ದಾರೆ.

ಇದನ್ನೂ ಓದಿ: Master Anand: ಆ ನೋವಿಗಿಂತ ಈಗ ಅನುಭವಿಸುತ್ತಿರುವ ನೋವೇ ವಾಸಿ;ಮಗನ ನೆನೆದು ಕಣ್ಣೀರಿಟ್ಟ ಮಾಸ್ಟರ್ ಆನಂದ್!!

‘ಮಹಾಂತ್ ನೃತ್ಯ ಗೋಪಾಲ್ ದಾಸ್ ಅವರ ಶಿಷ್ಯರು ರಾಮ ಮಂದಿರ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಲು ತಾಯಿಯನ್ನು ಆಹ್ವಾನಿಸಿದ್ದಾರೆ. ಸೋಮವಾರ ರಾತ್ರಿ ಧನ್‌ಬಾದ್ ರೈಲು ನಿಲ್ದಾಣದಿಂದ ಗಂಗಾ-ಸಟ್ಲೆಜ್ ಎಕ್ಸ್‌ಪ್ರೆಸ್ ಹತ್ತುವ ಮೂಲಕ ಅಯೋಧ್ಯೆಗೆ ತೆರಳಿದ್ದು, ಅವರು ಜನವರಿ 22 ರಂದು ಮೌನ ಉಪವಾಸವನ್ನು ಮುರಿಯಲಿದ್ದಾರೆ.

ನಾಲ್ಕು ಹೆಣ್ಣುಮಕ್ಕಳು ಸೇರಿದಂತೆ ಎಂಟು ಮಕ್ಕಳ ತಾಯಿಯಾದ ದೇವಿ 1986 ರಲ್ಲಿ ತನ್ನ ಪತಿ ದೇವಕಿನಂದನ್ ಅಗರ್ವಾಲ್ ಅವರ ಮರಣದ ನಂತರ ತನ್ನ ಜೀವನವನ್ನು ಭಗವಾನ್ ರಾಮನಿಗೆ ಅರ್ಪಿಸಿದ್ದರು ಮತ್ತು ತನ್ನ ಹೆಚ್ಚಿನ ಸಮಯವನ್ನು ತೀರ್ಥಯಾತ್ರೆಗಳಲ್ಲಿ ಕಳೆಯುತ್ತಿದ್ದರು ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ. ಪ್ರಸ್ತುತ ಅವರು ಬಿಸಿಸಿಎಲ್ ನಲ್ಲಿ ಅಧಿಕಾರಿಯಾಗಿರುವ ತನ್ನ ಎರಡನೇ ಹಿರಿಯ ಮಗ ನಂದಲಾಲ್ ಅಗರ್ವಾಲ್‌ನೊಂದಿಗೆ ಧನ್‌ಬಾದ್‌ನ ಧೈಯಾದಲ್ಲಿ ವಾಸಿಸುತ್ತಿದ್ದಾರೆ.

You may also like

Leave a Comment