Home » ಅಂದು ಪಾಕಿಸ್ತಾನ ಈ ಪವಿತ್ರ ದೇಗುಲವನ್ನು ಹೊಡೆದುರುಳಿಸಿತ್ತು | ಇಂದು ರಾಷ್ಟ್ರಪತಿಗಳ ಅಮೃತಹಸ್ತದಿಂದ ಆ ದೇವಾಲಯದ ಉದ್ಘಾಟನೆ ನೆರವೇರಿತು !!

ಅಂದು ಪಾಕಿಸ್ತಾನ ಈ ಪವಿತ್ರ ದೇಗುಲವನ್ನು ಹೊಡೆದುರುಳಿಸಿತ್ತು | ಇಂದು ರಾಷ್ಟ್ರಪತಿಗಳ ಅಮೃತಹಸ್ತದಿಂದ ಆ ದೇವಾಲಯದ ಉದ್ಘಾಟನೆ ನೆರವೇರಿತು !!

by ಹೊಸಕನ್ನಡ
0 comments

ಬಾಂಗ್ಲಾದೇಶದಲ್ಲಿ ಇತ್ತೀಚಿಗೆ ದೇವಾಲಯಗಳ ನಾಶ ಹೆಚ್ಚುತ್ತಿದೆ. ಈ ಹಿಂದೆ ಬಾಂಗ್ಲಾದಲ್ಲಿ ಪಾಕಿಸ್ತಾನ ಹೊಡೆದು ನಾಶಪಡಿಸಿದ್ದ ಕಾಳಿ ದೇವಾಲಯವನ್ನು ರಾಷ್ಟ್ರಪತಿ ರಾಮ್‍ನಾಥ್ ಕೋವಿಂದ್ ಅವರು ಇಂದು ಉದ್ಘಾಟನೆ ಮಾಡಿದ್ದಾರೆ.

ಬಾಂಗ್ಲಾದೇಶದ ಢಾಕಾದಲ್ಲಿ 1971ರಲ್ಲಿ ಪಾಕಿಸ್ತಾನಿ ಪಡೆಗಳು ಧ್ವಂಸಮಾಡಿದ್ದ ಐತಿಹಾಸಿಕ ಶ್ರೀ ರಮಣ ಕಾಳಿ ದೇವಸ್ಥಾನವನ್ನು ರಾಷ್ಟ್ರಪತಿಯವರು ಉದ್ಘಾಟನೆ ಮಾಡಿದ್ದಾರೆ. ಬರೋಬ್ಬರಿ 50 ವರ್ಷಗಳ ಬಳಿಕ ಈ ಐತಿಹಾಸಿಕ ದೇವಾಲಯವನ್ನು ನವೀಕರಣ ಮಾಡಲಾಗಿದೆ. 1971ರಲ್ಲಿ ಪಾಕಿಸ್ತಾನ ಸೇನೆ ಆಪರೇಷನ್ ಸರ್ಚ್ ಲೈಟ್ ಎಂಬ ಕಾರ್ಯಾಚರಣೆ ನಡೆಸಿ ದೇವಾಲಯವನ್ನು ಸಂಪೂರ್ಣವಾಗಿ ನಾಶ ಮಾಡಲಾಗಿತ್ತು.

ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮಾತನಾಡಿದ ಅವರು, ಭಾರತ ಮತ್ತು ಬಾಂಗ್ಲಾದೇಶದ ನಡುವಿನ ಸಂಬಂಧವು ಭಾಷೆ, ಸಂಸ್ಕೃತಿ ಮತ್ತು ರಕ್ತಸಂಬಂಧದಿಂದ ಗುರುತಿಸಲ್ಪಟ್ಟಿದೆ. ಅನ್ಯಾಯದ ವಿರುದ್ಧ ನಿಲ್ಲುವ ಧೈರ್ಯವನ್ನು ನಾವು ವಂದಿಸುತ್ತೇವೆ ಎಂದು ಹೇಳಿದ್ಧಾರೆ. ದೇವಾಲಯ, ಅತಿಥಿ ಗೃಹ, ಆಳವಾದ ಕೊಳವೆ ಬಾವಿ ಮತ್ತು ಮುಖ್ಯ ಪ್ರವೇಶ ದ್ವಾರವನ್ನು ಅವರಿಂದು ಉದ್ಘಾಟಿಸಿದ್ದಾರೆ.

ವಿದೇಶಾಂಗ ವ್ಯವಹಾರಗಳ ಕಾರ್ಯದರ್ಶಿ ಹರ್ಷವರ್ಧನ್, ಇದು ಎರಡು ದೇಶಗಳಿಗೆ ಭಾವನಾತ್ಮಕ ಕ್ಷಣ ಎಂದು ಬಣ್ಣಿಸಿದ್ದಾರೆ. 1971ರಲ್ಲಿ ಪಾಕಿಸ್ತಾನದಿಂದ ಬಾಂಗ್ಲಾದೇಶ ಮುಕ್ತಿಪಡೆದುಕೊಂಡಿತು ಎಂದು ಹೇಳಿದ್ದಾರೆ.

You may also like

Leave a Comment