Ramnagar: ಜಮೀನಿನಲ್ಲಿ ಪತ್ತೆಯಾಗಿದ್ದ ಮಹಿಳೆಯೋರ್ವಳ ಕೊಲೆ ಪ್ರಕರಣ ಹೊಸ ಟ್ವಿಸ್ಟ್ವೊಂದನ್ನು ನೀಡಿದೆ.
ದ್ಯಾವಪಟ್ಟಣ ಗ್ರಾಮದ 33 ವರ್ಷದ ಮಹಿಳೆಯೋರ್ವಳನ್ನು ಕೊಲೆ ಮಾಡಿ ಆಕೆಯ ಜಮೀನಿನಲ್ಲೇ ಪೈಪ್ಲೈನ್ನಲ್ಲಿ ಹೂತು ಹಾಕಲಾಗಿತ್ತು (Ramnagar murder). ಈ ಪ್ರಕರಣವನ್ನು ಬೇಧಿಸಿದ ಪೊಲೀಸರು ಯಾಕೆ ಈ ಕೊಲೆ ನಡೆದಿದೆ ಎಂಬ ಮಾಹಿತಿಯನ್ನು ಬಯಲಿಗೆಳೆದಿದ್ದಾರೆ. ಅಕ್ರಮ ಸಂಬಂಧದ ಕಾರಣ ಗೃಹಿಣಿಯ ಕೊಲೆ ನಡೆದಿದೆ ಎನ್ನಲಾಗಿದೆ.
17 ವರ್ಷದ ಅಪ್ರಾಪ್ತ ಕೊಲೆ ಆರೋಪಿಯಾಗಿದ್ದು, ಈತ ಪ್ರಥಮ ಬಿಎ ಓದುತ್ತಿರುವ ವಿದ್ಯಾರ್ಥಿ. ಕೊಲೆಯಾದ ಮಹಿಳೆ ಈತನ ಪಕ್ಕದ ಮನೆಯ ನಿವಾಸಿ. ವಿದ್ಯಾರ್ಥಿಗೂ ಮಹಿಳೆಗೂ ಅಕ್ರಮ ಸಂಬಂಧ ಇದ್ದು, ಇವರಿಬ್ಬರ ನಡುವೆ ಉಂಟಾದ ವೈಮನಸ್ಸು ಕೊಲೆತನಕ ಹೋಗಿದೆ ಎನ್ನಲಾಗಿದೆ.
ಇದನ್ನೂ ಓದಿ: Bengaluru City University: ಬೆಂಗಳೂರು ನಗರ ವಿಶ್ವವಿದ್ಯಾನಿಲಯ ಉಪನ್ಯಾಸಕ ಹುದ್ದೆ! ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಿ
