Bengaluru police commissioner Dayananda: ಬೆಂಗಳೂರು : ಪೊಲೀಸ್ ಠಾಣೆಗಳಲ್ಲಿ ಮೊದಲು ಮಾನವೀಯತೆಗಳಿಗೆ ಮೊದಲ ಪ್ರಾಶಸ್ತ್ಯವನ್ನು ನೀಡಿ ಎಂದು ಬೆಂಗಳೂರು ಪೊಲೀಸ್ ಆಯುಕ್ತ ದಯಾನಂದ (Bengaluru police commissioner Dayananda) ಪೊಲೀಸರಿಗೆ ಖಡಕ್ ಆದೇಶ ನೀಡಿದ್ದಾರೆ.
ನೂತನವಾಗಿ ನೇಮಕಗೊಂಡ ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿ ಬಿ. ದಯಾನಂದ ಮಾತನಾಡಿದ್ದು, ಮೊದಲು ಪೊಲೀಸ್ ಠಾಣೆಯಲ್ಲಿ ಮಾನವೀಯತೆಯನ್ನು ಬೆಳೆಸಿಕೊಳ್ಳಿ, ಪೊಲೀಸರೆಂದು ಭಯ ಪಡಿಸುವುದಲ್ಲ ಈ ವಿಚಾರಕ್ಕೆ ಸಂಬಂಧಪಟ್ಟ ದೂರುಗಳು ಬಂದ್ರೆ ಕಾನೂನು ಕ್ರಮ ಕಮ ಕೈಗೊಳ್ಳಲಾಗುತ್ತದೆ. ಅಲ್ಲದೇ ಪೊಲೀಸರನ್ನು ಕಂಡರೇ ಅದೇಷ್ಟೋ ಜನರಿಗೆ ಭಯವಿರೋದಿಂದ ಬಡವರು ಹಾಗೂ ಮಧ್ಯಮ ವರ್ಗದ ಜನರು ಠಾಣೆಗಳಿಗೆ ಆಗಮಿಸುವುದಿಲ್ಲ, ಜನರಲ್ಲಿ ಸೌಹಾರ್ದಯುತವಾಗಿ ಅವರ ಮನಸ್ಸನ್ನು ಗೆಲ್ಲಿ ಎಂದು ಸೂಚನೆ ನೀಡಿದ್ದಾರೆ.
ಇದನ್ನೂ ಓದಿ: ಒರಿಸ್ಸಾ ಬಾಲಾಸೋರ್ ರೈಲು ಅಪಘಾತ ಸಿಬಿಐ ತನಿಖೆಗೆ, ಕೇಂದ್ರ ರೈಲು ಮಂತ್ರಿ ಅಶ್ವಿನಿ ವೈಷ್ಣವಿ ಘೋಷಣೆ
