Udupi: ಕಳೆದ ಆರು ವರ್ಷಗಳಿಂದ ಉಡುಪಿ ಜಿಲ್ಲೆಯ ಕಾರ್ಕಳದ ಯುವಕನೊಬ್ಬ ದುಬೈನಲ್ಲಿ ಸಿಲುಕಿಕೊಂಡಿದ್ದು ತಾಯಿನಾಡಿಗೆ ಬರಲು ಪ್ರಯತ್ನ ಪಡುತ್ತಿದ್ದರೂ ಸಾಧ್ಯವಾಗಿರಲಿಲ್ಲ, ಹಾಗೂ ಇದೀಗ ಶಾಸಕ ಸುನಿಲ್ ಕುಮಾರ್ ಪ್ರಯತ್ನದ ಮೂಲಕ ಆತನನ್ನು ಅಲ್ಲಿಂದ ಬಿಡಿಸಲಾಗಿದೆ.
ಉದ್ಯೋಗದ ನಿಮಿತ್ತ ದುಬೈಗೆ ತೆರಳಿದ್ದ ಎಲ್ಲರೂ ನಿವಾಸಿ ಸಂದೀಪ್ ಅಲ್ಲಿನ ಸರ್ಕಾರದಿಂದ ದಿಗ್ಬಂಧನಕ್ಕೆ ಒಳಗಾಗಿದ್ದರು. ಹಾಗೂ ಈ ಕುರಿತಾಗಿ ಸಂದೀಪ್ ನ ಪೋಷಕರು ಸುನಿಲ್ ಕುಮಾರ್ ಅವರ ಗಮನಕ್ಕೆ ತಂದಾಗ, ಸಂದೀಪ್ ಸರ್ಕಾರಕ್ಕೆ ನೀಡಬೇಕಾಗಿದ್ದ ದಂಡವನ್ನು ಪಾವತಿಸದೆ ದಿಗ್ಬಂದನಕ್ಕೆ ಒಳಗಾಗಿದ್ದರು ಎಂಬ ವಿಷಯ ತಿಳಿದು ಬಂದಿರುತ್ತದೆ.
ಹಾಗೂ ಇದೀಗ ಸುನಿಲ್ ಕುಮಾರ್ ದಂಡವನ್ನು ಪಾವತಿಸಿ ಆ ವ್ಯಕ್ತಿಯನ್ನು ಬಿಡುಗಡೆಗೊಳಿಸಿರುತ್ತಾರೆ. ಹಾಗೂ ಮಂಗಳೂರಿನ ಶಕ್ತಿನಗರದ ವ್ಯಕ್ತಿ ಒಬ್ಬರಿಗೆ ತನ್ನ ವೀಸಾ ಐಡಿ ಕೊಟ್ಟು, ತಾನು ಮೋಸ ಹೋಗಿ ದಂಡವನ್ನು ಕಟ್ಟಬೇಕಾದ ಪರಿಸ್ಥಿತಿ ಬಂತು ಮತ್ತು ಈ ರೀತಿಯಾಗಿ ನಾನು ಅಲ್ಲಿನ ಆಡಳಿತದ ದಿಬ್ಬಂದನಕ್ಕೆ ಒಳಗಾಗಿದ್ದೆ ಎಂದು ಸಂದೀಪ್ ಹೇಳಿದ್ದಾರೆ.
