Home News ಲಕ್ಷಾಂತರ ರೂ ಬೆಲೆ ಬಾಳುವ ಗಿಳಿ ರಕ್ಷಿಸಲು ಹೋಗಿ ಸಾವಿಗೀಡಾದ ಯುವಕ

ಲಕ್ಷಾಂತರ ರೂ ಬೆಲೆ ಬಾಳುವ ಗಿಳಿ ರಕ್ಷಿಸಲು ಹೋಗಿ ಸಾವಿಗೀಡಾದ ಯುವಕ

Hindu neighbour gifts land to Muslim journalist

Hindu neighbor gifts plot of land

ಬೆಂಗಳೂರು: ಹೈಟೆನ್ಷನ್‌ ವೈರ್‌ ಕಂಬದ ಮೇಲೆ ಕುಳಿತಿದ್ದ ಎರಡು ಲಕ್ಷ ರೂ ಬೆಲೆಬಾಳುವ ಫಾರಿನ್‌ ಗಿಳಿಯನ್ನು ರಕ್ಷಿಸಲು ಹೋಗಿ ವಿದ್ಯುತ್‌ ಶಾಕ್‌ ಹೊಡೆದು ಯುವಕನೋರ್ವ ಸಾವಿಗೀಡಾಗಿರುವ ಘಟನೆ ಗಿರಿನಗರದ ಖಾಸಗಿ ಅಪಾರ್ಟ್‌ಮೆಂಟ್‌ನಲ್ಲಿ ನಡೆದಿದೆ.

ಅರುಣ್‌ ಕುಮಾರ್‌ (32) ಮೃತ ದುರ್ದೈವಿ. ಗಿರಿನಗರ ಪೊಲೀಸರು ಈ ಕುರಿತು ತನಿಖೆ ನಡೆಸುತ್ತಿದ್ದಾರೆ.

ಗಿರಿನಗರದ ಖಾಸಗಿ ಅಪಾರ್ಟ್‌ಮೆಂಟ್‌ ಒಳಭಾಗದಲ್ಲಿರುವ ಹೈಟೆನ್ಷನ್‌ ವೈರ್‌ ಕಂಬದ ಮೇಲೆ ಕುಳಿತಿತ್ತು. ಇದನ್ನು ಕಂಡ ಅರುಣ್‌ ಕುಮಾರ್‌, ಗಿಳಿ ರಕ್ಷಣೆಗೆ ಹೋಗಿದ್ದು, ಕಾಪೌಂಡ್‌ ಮೇಲೆ ನಿಂತು ಸ್ಟೀಲ್‌ ಪೈಪ್‌ಗೆ ಕಟ್ಟಿಗೆ ಸೇರಿಸಿ ಓಡಿಸಲು ಪ್ರಯತ್ನ ಪಟ್ಟಿದ್ದಾರೆ.

66 ಸಾವಿರ ಕೆವಿ ವಿದ್ಯುತ್‌ ವೈರ್‌ ನಿಂದ ಹೊಡೆದ ಶಾಕ್‌ಗೆ ಅರುಣ್‌ ಕಾಂಪೌಂಡ್‌ ಮೇಲಿಂದ ಕೆಳಗೆ ಬಿದ್ದಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಆದರೆ ಅಷ್ಟರಲ್ಲಿ ಅವರು ಮೃತಪಟ್ಟಿದ್ದಾರೆ.