Home » ಬೆಳ್ತಂಗಡಿ : ನಾಲ್ಕೂರಿನಲ್ಲಿ ನೇಣು ಬಿಗಿದು ಮಹಿಳೆ ಆತ್ಮಹತ್ಯೆ | ಕಾಡಿತೇ ಒಂಟಿತನ ?

ಬೆಳ್ತಂಗಡಿ : ನಾಲ್ಕೂರಿನಲ್ಲಿ ನೇಣು ಬಿಗಿದು ಮಹಿಳೆ ಆತ್ಮಹತ್ಯೆ | ಕಾಡಿತೇ ಒಂಟಿತನ ?

0 comments

ಬೆಳ್ತಂಗಡಿ ತಾಲೂಕಿನ ನಾಲ್ಕೂರು ಗ್ರಾಮದಲ್ಲಿ ಮಹಿಳೆಯೊಬ್ಬರು ಆ.28ರಂದು ಸಂಜೆ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ನಾಲ್ಕೂರು ಗ್ರಾಮದ ಬರಾಯ ಪಡೋಡಿ ಮನೆಯ ದಿ.ನಾರಾಯಣ ನಾಯ್ಕ ಅವರ ಪತ್ನಿ ಜಯಂತಿ (68 ವ) ಅವರೇ ನೇಣಿಗೆ ಕೊರಳೊಡ್ಡಿದವರು.

ಜಯಂತಿ ಅವರು ಯಾವಾಗಲೂ ಮನೆಯಲ್ಲಿ ಒಬ್ಬರೇ ಇರುತ್ತಿದ್ದರೆನ್ನಲಾಗುತ್ತಿದೆ.ಇದರಿಂದಾಗಿ ಅವರಿಗೆ ಒಂಟಿತನ ಕಾಡಿತೇ ಎಂದು ಸಂಶಯಿಸಲಾಗಿದೆ.

ಘಟನೆ ಕುರಿತು ವೇಣೂರು ಪೋಲಿಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.

banner

You may also like

Leave a Comment