Home » BJP Highcommand: JDSಗೆ ಮಹತ್ವದ ಸಂದೇಶ ರವಾನಿಸಿದ ಬಿಜೆಪಿ ಹೈಕಮಾಂಡ್ !!

BJP Highcommand: JDSಗೆ ಮಹತ್ವದ ಸಂದೇಶ ರವಾನಿಸಿದ ಬಿಜೆಪಿ ಹೈಕಮಾಂಡ್ !!

5 comments
BJP Highcommand

BJP Highcommand: ರಾಜ್ಯದಲ್ಲಿ ಭಾರೀ ಸಂಚಲನ ಸೃಷ್ಟಿಸಿರುವ ಪ್ರಜ್ವಲ್ ರೇವಣ್ಣ(Prajwal Revanna) ಅಶ್ಲೀಲ ವಿಡಿಯೋ ಪ್ರಕರಣ ಬಿಜೆಪಿ-ಜೆಡಿಎಸ್ ಮೈತ್ರಿಗೆ ಭಾರೀ ದೊಡ್ಡ ಹೊಡೆತ ನೀಡಿದೆ. ಈ ಹಿನ್ನೆಲೆಯಲ್ಲಿ ಇದೀಗ ಬಿಜೆಪಿ ಹೈಕಮಾಂಡ್ JDSಗೆ ಮಹತ್ವದ ಸಂದೇಶ ರವಾನಿಸಿದೆ.

ಇದನ್ನೂ ಓದಿ: Yes Bank ನಲ್ಲಿ ಉದ್ಯೋಗವಕಾಶ! ಹೀಗೆ ಅಪ್ಲೈ ಮಾಡಿ

ಹೌದು, ಬಿಜೆಪಿ ಹೈಕಮಾಂಡ್‌ನಿಂದ (BJP Highcommand) JDSಗೆ ಖಡಕ್ ಸಂದೇಶ ರವಾನೆಯಾಗಿದ್ದು, ಎಸ್‌ಐಟಿ ವಿಚಾರಣೆ (SIT Investigation) ಎದುರಿಸಿ, ಕಾನೂನು ಹೋರಾಟ ಮಾಡಿಕೊಳ್ಳಿ, ಮೊದಲು ವಿದೇಶದಿಂದ ಪ್ರಜ್ವಲ್‌ರನ್ನ ವಾಪಸ್ ಕರೆಸಿಕೊಳ್ಳಿ ಎಂದು ಜೆಡಿಎಸ್ ವರಿಷ್ಠರಿಗೆ (JDS Leaders) ಸಂದೇಶ ನೀಡಲಾಗಿದೆ. ಒಟ್ಟಿನಲ್ಲಿ ಕಾನೂನು ಮೀರದಂತೆ ಎಚ್ಚರಿಕೆಯನ್ನೂ ನೀಡಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಇದನ್ನೂ ಓದಿ: Kukke Subrahmanya: ಕುಕ್ಕೆ ಸುಬ್ರಹ್ಮಣ್ಯ ದೇಗುಲಕ್ಕೆ ನೇಮಕವಾಗಿರುವ ಯೇಸುರಾಜ್‌ ಯಾವ ಸಮುದಾಯದವರು?

ಬಿಜೆಪಿ ಹೈಕಮಾಂಡ್ ರವಾನಿಸಿದ ಸಂದೇಶ ಏನು?

• SIT ವಿಚಾರಣೆ ಎದುರಿಸಿ, ಕಾನೂನು ಹೋರಾಟ ಮಾಡಿ.

• ಹೊಂದಾಣಿಕೆ ಅಷ್ಟೇ ಸಮರ್ಥನೆಯಿಲ್ಲ, ಸಹಾಯವೂ ಇಲ್ಲ ಎಂದಿತಾ ಹೈಕಮಾಂಡ್?

• ಮಹಿಳೆಯರಿಗೆ ಅನ್ಯಾಯ ಆಗೋದನ್ನು ಬಿಜೆಪಿ ಸಹಿಸಲ್ಲ.

ಇನ್ನು ಬಿಜೆಪಿ ಹೈಕಮಾಂಡ್ ಸಂದೇಶದ ಬೆನ್ನಲ್ಲೇ ಕಾನೂನು ಹೋರಾಟಕ್ಕೆ ಮಾಜಿ ಸಚಿವ ಹೆಚ್.ಡಿ ರೇವಣ್ಣ ಸಜ್ಜಾಗುತ್ತಿದ್ದಾರೆ, ಕಾನೂನು ಹೋರಾಟದ ಬಗ್ಗೆ ದೇವೇಗೌಡರ ಜೊತೆ ಸುದೀರ್ಘ ಮಾತುಕತೆ ನಡೆಸಿದ್ದು, ವಕಿಲರೊಂದಿಗೆ ಚರ್ಚಿಸಿ ಶೀಘ್ರದಲ್ಲೇ ವಿದೇಶದಿಂದ ಪುತ್ರನ ಕರೆಸಿಕೊಳ್ಳಲು ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ.

You may also like

Leave a Comment