Home » Balakrishna Nayak: ಚೈತ್ರ ಮತ್ತು ಆಕೆಯ ಗಂಡ ಇಬ್ಬರೂ ಕಳ್ಳರು – ಚೈತ್ರ ಕುಂದಾಪುರ ತಂದೆ ಹೇಳಿಕೆ !!

Balakrishna Nayak: ಚೈತ್ರ ಮತ್ತು ಆಕೆಯ ಗಂಡ ಇಬ್ಬರೂ ಕಳ್ಳರು – ಚೈತ್ರ ಕುಂದಾಪುರ ತಂದೆ ಹೇಳಿಕೆ !!

0 comments

Balakrishna Nayak: ಚೈತ್ರ ಕುಂದಾಪುರ ಮದುವೆಯ ಬಳಿಕ ಅವರ ತಂದೆ ಬಾಲಕೃಷ್ಣ ನಾಯಕ ಅವರು ದಿಢೀರ್ ಎಂದು ಪ್ರತ್ಯಕ್ಷ ಆಗಿ ಮಗಳು ಮತ್ತು ಹೆಂಡತಿಯ ಮೇಲೆ ಆರೋಪಗಳ ಸುರಿಮಳೆಯನ್ನು ಮಾಡಿದ್ದಾರೆ.

ಹೌದು, ಮಾಧ್ಯಮಗಳ ಮುಂದೆ ಪ್ರತ್ಯಕ್ಷ ಆಗಿರುವ ಬಾಲಕೃಷ್ಣ ನಾಯಕ ಅವರು ಚೈತ್ರ ಮತ್ತು ಆಕೆಯ ಗಂಡ ಇಬ್ಬರೂ ಕಳ್ಳರು ಎಂದು ಆರೋಪಿಸಿದ್ದಾರೆ. ಅಲ್ಲದೆ ಆಕೆ ನನ್ನನ್ನು ಮದುವೆಗೆ ಕರೆದಿಲ್ಲ. ನಾನು ಮದುವೆಗೆ ಹೋಗಿಲ್ಲ. ಈ ಮದುವೆಯನ್ನು ನಾನು ಒಪ್ಪಲಾರೆ. ಚೈತ್ರಾ ಮತ್ತು ಆಕೆಯ ಪತಿ ಇಬ್ಬರೂ ಕಳ್ಳರು. ನನ್ನ ಪತ್ನಿ ಕೂಡ ಚೈತ್ರಾ ಬೆಂಬಲಕ್ಕೆ ನಿಂತಿದ್ದಾಳೆ. ಇವರೆಲ್ಲ ಹಣದ ಆಸೆಗಾಗಿ ಹೀಗೆ ಮಾಡುತ್ತಿದ್ದಾರೆ ಎಂದಿದ್ದಾರೆ.

ಅಲ್ಲದೆ ಗೋವಿಂದ ಬಾಬು ಪೂಜಾರಿ ಪ್ರಕರಣದಲ್ಲೂ ಇವರು ಹಣ ಹಂಚಿಕೊಂಡಿದ್ದಾರೆ. ನನಗೆ ನನ್ನ ದೊಡ್ಡ ಮಗಳು ಮಾತ್ರ ಆಸರೆ. ನನ್ನ ದೊಡ್ಡ ಮಗಳು ಗಾಯತ್ರಿ ನಿರಪರಾಧಿ. ನಾನು ಮತ್ತು ನನ್ನ ದೊಡ್ಡ ಮಗಳು ಮರ್ಯಾದೆಯಿಂದ ಬದುಕುತ್ತಿದ್ದೇವೆ. ಚೈತ್ರಾ ಬಿಗ್​ಬಾಸ್ ಮನೆಗೆ ಹೋಗುವಾಗಲೂ ನನಗೆ ಹೇಳಿಲ್ಲ. ನನ್ನ ಪತ್ನಿ ನನ್ನನ್ನು ಜಗಲಿಯಲ್ಲಿ ಬಿಟ್ಟು ಬೇಗ ಹಾಕಿ ಬಿಗ್​ಬಾಸ್​ಗೆ ಹೋಗಿದ್ದಳು. ನಾನು ಕಟ್ಟಿದ ಮನೆಯಲ್ಲಿ ಈಗ ನಾನೇ ಅನಾಥವಾಗಿದ್ದೇನೆ ಎಂದು ಕಣ್ಣೀರು ಹಾಕಿದ್ದಾರೆ.

You may also like