Home » Belthangady: ಬೆಳ್ತಂಗಡಿ: ನಂದಿಬೆಟ್ಟ ಗರ್ಡಾಡಿಯಲ್ಲಿ ದಿ.ಶೈಲೇಶ್ ಶೆಟ್ಟಿ ಸ್ಮರಣಾರ್ಥ ಬಸ್‌ ತಂಗುದಾಣ ಉದ್ಘಾಟನೆ

Belthangady: ಬೆಳ್ತಂಗಡಿ: ನಂದಿಬೆಟ್ಟ ಗರ್ಡಾಡಿಯಲ್ಲಿ ದಿ.ಶೈಲೇಶ್ ಶೆಟ್ಟಿ ಸ್ಮರಣಾರ್ಥ ಬಸ್‌ ತಂಗುದಾಣ ಉದ್ಘಾಟನೆ

by ಕಾವ್ಯ ವಾಣಿ
0 comments

Belthangady: ನಂದಿ ಫ್ರೆಂಡ್ಸ್ ನಂದಿಬೆಟ್ಟ ಇವರ ವತಿಯಿಂದ ದಿ! ಶೈಲೇಶ್ ಶೆಟ್ಟಿಯವರ ಸವಿನೆನಪಿಗಾಗಿ ಗರ್ಡಾಡಿ ನಂದಿಬೆಟ್ಟದಲ್ಲಿ ಊರ ಹಾಗೂ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ನಿರ್ಮಾಣಗೊಂಡ ಸಾರ್ವಜನಿಕ ಬಸ್ ತಂಗುದಾಣವನ್ನು, ಮಾನ್ಯ ಶಾಸಕ ಹರೀಶ್ ಪೂಂಜರವರು ದೀಪ ಬೆಳಗಿಸುವ ಮೂಲಕ ಲೋಕಾರ್ಪಣೆ ಮಾಡಿದರು.

ಕಾರ್ಯಕ್ರಮದಲ್ಲಿ ಪಡಂಗಡಿ ಗ್ರಾಮ ಪಂಚಾಯತ್ ಅಧ್ಯಕ್ಷರು ಪ್ರಶಾಂತ್ ಸುವರ್ಣ,ಉಪಾಧ್ಯಕ್ಷರು ವಸಂತಿ ಪಿ,l ಪ್ರಾಥಮಿಕ ಕ್ರಷಿ ಪತ್ತಿನ ಸಹಕಾರಿ ಸಂಘ ಪಡಂಗಡಿ ಇದರ ಅಧ್ಯಕ್ಷರು ಅಂತೋನಿ ಫೆರ್ನಾಂಡಿಸ್,ಮದಿರಾ ಬಾರ್ & ರೆಸ್ಟೋರೆಂಟ್ ಗರ್ಡಾಡಿ ಮಾಲೀಕರು ಹರೀಶ್ ಶೆಟ್ಟಿ, ಆಳ್ವಾಸ್ ಶಿಕ್ಷಣ ಸಂಸ್ಥೆಯ ಪ್ರೋಪೆಸರ್ ರಘುನಂದನ್ ಭಟ್, ಗ್ರಾಮ ಪಂಚಾಯತ್ ಸದಸ್ಯರಾದ ಕೃಷ್ಣಪ್ಪ, ಶುಭ ದಿನಕರ್ ,ನಂದಿಕೇಶ್ವರ ದೇವಸ್ಥಾನ ದ ನಿಕಟಪೂರ್ವ ಮೊಕ್ತೇಸರರು ಗ್ರಾಮ ಪಂಚಾಯತ್ ಸದಸ್ಯರು .ಯೋಗಿಶ್ ಭಟ್ , ನಂದಿಕೇಶ್ವರ ದೇವಸ್ಥಾನದ ಆಡಲಿತ ಮೊಕ್ತೇಸರರು ಹರೀಶ್ ಕೋಟ್ಯಾನ್,ಸುಜಯ್ ಶೆಟ್ಟಿ CEO ವಿಜಯ ಕ್ರೆಡಿಟ್ ಕೋ ಆಪರೇಟಿವ್ ಬ್ಯಾಂಕ್ ಗುರುವಾಯನಕೆರೆ .ಹಾಗೂ ಗ್ರಾಮಸ್ಥರು ಭಾಗವಹಿಸಿ ಶುಭ ಹಾರೈಸಿದರು.

You may also like