Home » ಶೇಣಿ :ಪ್ರಯಾಣಿಕರ ತಂಗುದಾಣದ ಲೋಕಾರ್ಪಣೆ

ಶೇಣಿ :ಪ್ರಯಾಣಿಕರ ತಂಗುದಾಣದ ಲೋಕಾರ್ಪಣೆ

0 comments

ಸಾರ್ವಜನಿಕ ಶ್ರೀಕೃಷ್ಣ ಸೇವಾ ಸಮಿತಿ (ರಿ). ಶೇಣಿ ಇದರ ನೇತೃತ್ವದಲ್ಲಿ ಊರ ದಾನಿಗಳ ಸಹಕಾರದಿಂದ ಶೇಣಿಯಲ್ಲಿ ನಿರ್ಮಿಸಿದ ಸಾರ್ವಜನಿಕ ಪ್ರಯಾಣಿಕರ ತಂಗುದಾಣದ ಲೋಕಾರ್ಪಣೆ ಕಾರ್ಯಕ್ರಮವು ದಿನಾಂಕ 03/11/2021 ರಂದು ಪೂರ್ವಾಹ್ನ 10.00 ಗಂಟೆಗೆ ಸರಿಯಾಗಿ ಶೇಣಿಯಲ್ಲಿ ನಡೆಯಲಿದೆ .ಸಮಾರಂಭದ ಉದ್ಘಾಟನೆಯನ್ನು ನಿವೃತ್ತ ಉಪನ್ಯಾಸಕರಾದ ಶ್ರೀ ಅನಂತಪದ್ಮನಾಭ ಗೋಪಾಲ ಕಜೆ ಇವರು ನೆರವೇರಿಸಲಿದ್ದಾರೆ .ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಧವ ಗೌಡ ಪಿಂಡಿಬನ ವಹಿಸಲಿದ್ದಾರೆ .ಮುಖ್ಯ ಅತಿಥಿಗಳಾಗಿ ಬೆಳ್ಳಾರೆ ಆರಕ್ಷಕ ಠಾಣೆಯ ಠಾಣಾಧಿಕಾರಿಗಳಾದ ಆಂಜನೇಯ ರೆಡ್ಡಿ, ನಿವೃತ್ತ ಶಿಕ್ಷಕರಾದ ಶ್ರೀ ರಘುನಾಥ ಕಾಯರ ,ಅಮರ ಪಡ್ನೂರು ರು ಶಾಲೆಯ ಮುಖ್ಯ ಶಿಕ್ಷಕರಾದ ಶ್ರೀಮತಿ ರಮಾ ಕಿಶೋರಿ, ವೈದ್ಯರಾದ ಡಾ. ಸನತ್ ಕುಮಾರ್ ಡಿ.ಜಿ. ವಹಿಸಲಿದ್ದಾರೆ . ಎಂದು ಸಮಿತಿಯ ಪ್ರಧಾನ ಕಾರ್ಯದರ್ಶಿ ಸೃಜನ್ ಶೇಣಿ ತಿಳಿಸಿದ್ದಾರೆ .

You may also like

Leave a Comment