Home » Dakshina Kannada: ಚೈತ್ರಾ ಡೀಲ್‌ ಕೇಸ್‌; ಹಿಂದೂ ಪರ ಸ್ವಾಮೀಜಿಗೆ ಸಿಸಿಬಿಯಿಂದ ನೋಟಿಸ್‌ ಜಾರಿ!!!

Dakshina Kannada: ಚೈತ್ರಾ ಡೀಲ್‌ ಕೇಸ್‌; ಹಿಂದೂ ಪರ ಸ್ವಾಮೀಜಿಗೆ ಸಿಸಿಬಿಯಿಂದ ನೋಟಿಸ್‌ ಜಾರಿ!!!

1 comment
Dakshina Kannada

Dakshina Kannada: ಬಿಜೆಪಿ ಟಿಕೆಟ್‌ ನೀಡುವುದಾಗಿ ವಂಚನೆ ಪ್ರಕರಣದಲ್ಲಿ ಸಿಲುಕಿಕೊಂಡಿರುವ, ಈಗ ಸಿಸಿಬಿ ವಶದಲ್ಲಿರುವ ಚೈತ್ರಾ ಹಾಗೂ ಹಾಲಶ್ರೀ ಸ್ವಾಮೀಜಿ ಬಂಧನವಾಗಿ ತಿಂಗಳುಗಳೇ ಕಳೆದಿದೆ. ಇದೀಗ ದಕ್ಷಿಣ ಕನ್ನಡದ (Dakshina Kannada) ಹಿಂದೂ ಪರ ಸ್ವಾಮೀಜಿಗೆ ವಿಚಾರಣೆಗೆ ಹಾಜರಾಗಲು ನೋಟಿಸ್‌ ಜಾರಿಯಾಗಿದೆ ಎಂದು ವರದಿಯಾಗಿದೆ.

ಬೈಂದೂರಿನ ಬಿಜೆಪಿ ಟಿಕೆಟ್‌ ನೀಡುವುದಾಗಿ ಉದ್ಯಮಿ ಗೋವಿಂದ ಬಾಬು ಪೂಜಾರಿ ಅವರಿಗೆ ವಂಚನೆ ನಡೆದಿದ್ದು, ಈ ಪ್ರಕರಣದ ಸಮಯದಲ್ಲಿ ಚೈತ್ರ ಇಡಿಗೆ ಪತ್ರ ಬರೆದಿದ್ದು, ಅದರಲ್ಲಿ ವಜ್ರಾದೇಹಿ ಶ್ರೀ, ಚಕ್ರವರ್ತಿ ಸೂಲಿಬೆಲೆ, ಹಾಗೂ ಸಿಟಿ ರವಿ ಹೆಸರು ಉಲ್ಲೇಖ ಮಾಡಲಾಗಿತ್ತು.

ಮಂಗಳೂರು ಗುರುಪುರ ವಜ್ರಾದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿಗೆ ಸಿಸಿಬಿ ನೋಟಿಸ್‌ ಜಾರಿ ಮಾಡಿದೆ.

ಬೆಂಗಳೂರು ನಗರ ಸಿಸಿಬಿ ಮಹಿಳಾ ಸಂರಕ್ಷಣಾ ತನಿಖಾಧಿಕಾರಿ ಮುಂದೆ ಹಾಜರಾಗಲು ಬೆಂಗಳೂರು ಸಿಸಿಬಿ ಸಹಾಯಕ ಪೊಲೀಸ್‌ ಕಮಿಷನರ್‌ ರೀನಾ ಸುವರ್ಣ ಅವರು ನೋಟಿಸ್‌ ಜಾರಿ ಮಾಡಿದ್ದಾರೆ.

 

ಇದನ್ನು ಓದಿ: Social Media: ರೀಲ್ಸ್’ಗಾಗಿ ನಡುರಸ್ತೆಯಲ್ಲೇ ಕಾಲಗಲಿಸಿ ಕುಳಿತ ಮಹಿಳೆ !! ಫೇಮಸ್ ಆಗಲು ಈಕೆ ಮಾಡಿದ್ದೇನೆಂದು ಗೊತ್ತಾದ್ರೆ ನೀವೂ ಹೌಹಾರುತ್ತೀರಾ !!

You may also like

Leave a Comment