Home » Belthangady: ಬಸ್‌ ಚಾಲನೆ ವೇಳೆ ಕಾಡಿದ ಎದೆನೋವು; ಆಸ್ಪತ್ರೆ ಸಾಗಿಸುವ ದಾರಿಮಧ್ಯೆ ಚಾಲಕ ಸಾವು

Belthangady: ಬಸ್‌ ಚಾಲನೆ ವೇಳೆ ಕಾಡಿದ ಎದೆನೋವು; ಆಸ್ಪತ್ರೆ ಸಾಗಿಸುವ ದಾರಿಮಧ್ಯೆ ಚಾಲಕ ಸಾವು

0 comments

Belthangady: ಸುಳ್ಯ ತೊಡಿಕಾನ ಖಾಸಗಿ ಅವಿನಾಶ್‌ ಬಸ್‌ನಲ್ಲಿ ಚಾಲಕ ಆಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೋರ್ವರಿಗೆ ಎದೆನೋವು ಕಾಣಿಸಿಕೊಂಡಿದ್ದು ಆಸ್ಪತ್ರೆಗೆ ಸಾಗಿಸುವ ದಾರಿಮಧ್ಯದಲ್ಲಿಯೇ ಮೃತ ಹೊಂದಿದ ಘಟನೆ ನಡೆದಿದೆ.

ಗುರುಪ್ರಸಾದ್‌ ಕುಂಚಡ್ಕ (30ವರ್ಷ) ಮೃತ ವ್ಯಕ್ತಿ.

ಬಸ್‌ನಲ್ಲಿ ಕೆಲಸ ಮಾಡುತ್ತಿದ್ದಾಗಲೇ ಕಾಣಿಸಿಕೊಂಡ ಎದೆನೋವು, ಅವರ ಜೀವ ತೆಗೆದುಕೊಂಡಿದೆ. ಎದೆನೋವು ಕಾಣಿಸಿಕೊಂಡಾಗ ಕೂಡಲೇ ಅವರನ್ನು ರಿಕ್ಷಾವೊಂದರಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಆದರೆ ಆಸ್ಪತ್ರೆಗೆ ಸಾಗಿಸುವಾಗ ದಾರಿ ಮಧ್ಯೆ ಅರಂಬೂರು ಬಳಿ ಆಟೋ ರಿಕ್ಷಾದಲ್ಲಿಯೇ ಪ್ರಾಣ ಬಿಟ್ಟಿರುವುದಾಗಿ ವರದಿಯಾಗಿದೆ.

You may also like

Leave a Comment