Home » Davanagere: ವಾಹನ ತಪಾಸಣೆ ಸಂದರ್ಭ ಲಾರಿ ಹರಿದು ಪೊಲೀಸ್‌ ಕಾನ್ಸ್‌ಟೇಬಲ್‌ ಸಾವು

Davanagere: ವಾಹನ ತಪಾಸಣೆ ಸಂದರ್ಭ ಲಾರಿ ಹರಿದು ಪೊಲೀಸ್‌ ಕಾನ್ಸ್‌ಟೇಬಲ್‌ ಸಾವು

0 comments

Davanagere: ವಾಹನ ತಪಾಸಣೆ ಸಂದರ್ಭ ಪೊಲೀಸ್‌ ಕಾನ್ಸ್‌ಟೇಬಲ್‌ ಮೇಲೆ ಲಾರಿಯೊಂದು ಹರಿದು ಸಾವಿಗೀಡಾದ ಘಟನೆ ದಾವಣಗೆರೆಯ ಹೆಬ್ಬಾಳು ಟೋಲ್‌ ಗೇಟ್‌ ಬಳಿ ನಡೆದಿದೆ.

ರಾಮಪ್ಪ ಪೂಜಾರ್‌ (27) ಮೃತ ಡಿಎಆರ್‌ ಕಾನ್ಸ್‌ಟೇಬಲ್.‌ ಹೆಬ್ಬಾಳು ಟೋಲ್‌ ಗೇಟ್‌ ಬಳಿ ಪೊಲೀಸರು ವಾಹನ ತಪಾಸಣೆ ಮಾಡುತ್ತಿದ್ದ ಸಂದರ್ಭದಲ್ಲಿ ರಾಮಪ್ಪ ಪೂಜಾರ್‌ ಮೇಲೆ ಚಾಲಕ ಲಾರಿ ಹರಿಸಿ ಎಸ್ಕೇಪ್‌ ಆಗಿದ್ದಾನೆ. ಗಂಭೀರ ಗಾಯಗೊಂಡಿದ್ದ ಕಾನ್ಸ್‌ಟೇಬಲ್‌ ರಾಮಪ್ಪ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆದರೆ ಚಿಕಿತ್ಸೆ ಫಲಿಸದೇ ಅವರು ಮೃತ ಹೊಂದಿದ್ದಾರೆ.

ರಾಮಪ್ಪ ಅವರ ಮೃತದೇಹವನ್ನು ಎಸ್‌ಎಸ್‌ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ.

You may also like