Davanagere News : ಮನೆಯಲ್ಲಿ ಆಟವಾಡುವಾಗ ಮೈ ಮೇಲೆ ಬಿಸಿ ಸಾಂಬಾರ್ ಬಿದ್ದು ಬಾಲಕನೊಬ್ಬ ಸಾವಿನ ದವಡೆಗೆ ಸಿಲುಕಿದ ದಾರುಣ ಘಟನೆ ದಾವಣಗೆರೆಯಲ್ಲಿ(Davanagere News) ನಡೆದಿದೆ.
ದಾವಣಗೆರೆಯಲ್ಲಿ (Davanagere News)ಬಿಸಿ ಸಾಂಬರ್ ಮೈ ಮೇಲೆ ಬಿದ್ದ ಪರಿಣಾಮ ಗಂಭೀರ ಗಾಯಗೊಂಡಿದ್ದ ಬಾಲಕನೊರ್ವ ಚಿಕಿತ್ಸೆ ಫಲಕಾರಿಯಾದೆ ಮೃತಪಟ್ಟಿರುವ(Death)ಘಟನೆ ನಡೆದಿದೆ.ಮೃತ ದುರ್ದೈವಿಯನ್ನು ದಾವಣಗೆರೆಯ ಚನ್ನಗಿರಿ ತಾಲೂಕಿನ ಯಲೋದಹಳ್ಳಿ ಗ್ರಾಮದ ಸಮರ್ಥ್ (12) ಎಂದು ಗುರುತಿಸಲಾಗಿದೆ.
ಸಮರ್ಥ್ ಮನೆಯಲ್ಲಿ ಆಟವಾಡುತ್ತಿದ್ದ ಸಂದರ್ಭ ಮೈ ಮೇಲೆ ಬಿಸಿ ಸಾಂಬಾರ್ ಬಿದ್ದಿದೆ. ಬಿಸಿ ಸಾಂಬಾರ್ ಮೈ ಮೇಲೆ ಬಿದ್ದ ಪರಿಣಾಮ ಸುಟ್ಟ ಗಾಯಗಳಾಗಿದೆ. ಹೀಗಾಗಿ, ಆತನನ್ನು ದಾವಣಗೆರೆಯ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಎರಡು ದಿನಗಳ ಕಾಲ ಆಸ್ಪತ್ರೆಯಲ್ಲಿದ್ದ ಸಮರ್ಥ್ ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟಿದ್ದಾನೆ.
ಇದನ್ನು ಓದಿ: APL-BPL ಕಾರ್ಡ್ ವಿತರಣೆ ಕುರಿತು ಸಚಿವರಿಂದ ಬಿಗ್ ಅಪ್ಡೇಟ್!!
