Home » ಭರಣಿಯೊಳಗೆ ಸಿಲುಕಿದ ನಾಯಿ‌ಯ ತಲೆ | ಅಗ್ನಿಶಾಮಕ ದಳದ ಸಿಬಂದಿಯಿಂದ ರಕ್ಷಣೆ

ಭರಣಿಯೊಳಗೆ ಸಿಲುಕಿದ ನಾಯಿ‌ಯ ತಲೆ | ಅಗ್ನಿಶಾಮಕ ದಳದ ಸಿಬಂದಿಯಿಂದ ರಕ್ಷಣೆ

by Praveen Chennavara
0 comments

ನಾಯಿಯ ತಲೆಯೊಂದು ಆಕಸ್ಮಿಕವಾಗಿ ಪ್ಲಾಸ್ಟಿಕ್‌ ಭರಣಿಯೊಳಗೆ ಸಿಲುಕಿ ಕಳೆದ ಮೂರು ದಿನಗಳಿಂದ ಪರದಾಡುತ್ತಿದ್ದು ಅಗ್ನಿಶಾಮಕ ದಳದ ಸಿಬಂದಿ ರಕ್ಷಿಸಿದ ಘಟನೆ ಉಡುಪಿ ಜಿಲ್ಲೆಯ ಕುಂದಾಪುರದ ತೆಕ್ಕಟ್ಟೆ ಸಮೀಪ ನಡೆದಿದೆ.

ಹಿರಿಯ ಪರಿಸರವಾದಿ ಕೊರ್ಗಿ ವಿಠಲ್‌ ಶೆಟ್ಟಿ ಅವರು ಅ. 2ರಂದು ತಮ್ಮ 76ನೇ ಹುಟ್ಟು ಹಬ್ಬದ ಆಚರಣೆ ಹಿನ್ನೆಲೆಯಲ್ಲಿ ವಿಶೇಷ ಚೇತನ ಮಕ್ಕಳಿಗಾಗಿ ಹಣ್ಣು ಹಂಪಲು ವಿತರಣೆಗೆಂದು ತೆರಳಿದ ಸಂದರ್ಭ ಅಲ್ಲಿಯೇ ಸಮೀಪ ನಾಯಿಯಿಂದರ ತಲೆಗೆ ಪ್ಲಾಸ್ಟಿಕ್‌ ಭರಣಿಯೊಳಗೆ ಸಿಲುಕಿಕೊಂಡು ಪರಿತಪಿಸುತ್ತಿರುವುದನ್ನು ಕಂಡರು. ತತ್‌ಕ್ಷಣವೇ ಅವರು ಕುಂದಾಪುರ ಅಗ್ನಿಶಾಮಕ ದಳದ ಸಿಬಂದಿಗಳ ಗಮನಕ್ಕೆ ತಂದರು.

ಅಗ್ನಿಶಾಮಕ ದಳದ ಸಿಬಂದಿ ಗಳಾದ ನಾಗರಾಜ್‌ ಪೂಜಾರಿ, ರವೀಂದ್ರ ದೇವಾಡಿಗ, ಚಂದ್ರಕಾಂತ್‌ ನಾಯ್ಕ, ಬಸವರಾಜ್‌ ತಂಡ ನಾಯಿಯ ಪ್ರಾಣ ರಕ್ಷಣೆಗಾಗಿ ಮುಂದಾದರು. ಮೊದಲು ನಾಯಿಯ ರಕ್ಷಣೆಗಾಗಿ ಬಲೆ ಬೀಸಿ ಸುತ್ತುವರಿದರಾದರೂ ಶ್ವಾನ ಜೀವ ಭಯದಿಂದ ಓಡಲು ಆರಂಭಿಸಿತು. ಕೊನೆಗೂ ಸಿಬಂದಿ ಬಾಟಲಿ ತೆಗೆಯಲು ಯಶಸ್ವಿಯಾಗಿ ಶ್ವಾನದ ಪ್ರಾಣವನ್ನು ರಕ್ಷಿಸಿದರು. ಸಿಬಂದಿಯ ಈ ಪ್ರಯತ್ನ ಎಲ್ಲರ ಶ್ಲಾಘನೆಗೆ ಪಾತ್ರವಾಯಿತು.

You may also like

Leave a Comment