4
Elephant-human conflict: ಕೊಡಗು(Kodagu) ಮತ್ತು ಮೈಸೂರು(Mysore) ಜಿಲ್ಲಾ ವ್ಯಾಪ್ತಿಯಲ್ಲಿ ಮಿತಿ ಮೀರಿರುವ ಕಾಡಾನೆ(Wild elephant) ಹಾವಳಿ ನಿಯಂತ್ರಣಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಒತ್ತಾಯಿಸಿ ಕ್ಷೇತ್ರದ ಸಂಸದ ಯದುವೀರ್ ಒಡೆಯರ್(MP Yaduveer Odeyar) ಅವರು ಕೇಂದ್ರ ಪರಿಸರ ಸಚಿವ(Environment minister) ಭೂಪೇಂದ್ರ ಯಾದವ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಕಾಡಾನೆಗಳ ನಿರಂತರ ದಾಳಿಯಿಂದ ಕೃಷಿ ಕ್ಷೇತ್ರಕ್ಕೆ ನಷ್ಟವಾಗುತ್ತಿದೆ ಮತ್ತು ಮಾನವರ ಮೇಲೂ ದಾಳಿಗಳಾಗುತ್ತಿದೆ. ಆದ್ದರಿಂದ ಕಾಡಾನೆಗಳು ಕಾಡು ಬಿಟ್ಟು ನಾಡಿಗೆ ಲಗ್ಗೆ ಇಡುವುದನ್ನು ತಡೆಯಲು ಹೆಚ್ಚಿನ ಪ್ರಮಾಣದ ರೈಲ್ವೆ ಬ್ಯಾರಿಕೇಡ್ ಗಳನ್ನು ಅಳವಡಿಸಲು ಕ್ರಮ ಕೈಗೊಳ್ಳಬೇಕೆಂದು ಸಂಸದರು ಸಚಿವರಲ್ಲಿ ಮನವಿ ಮಾಡಿದರು.
