Actress Umashree: ಮಸ್ಕಿ ಪಟ್ಟಣದಲ್ಲಿ ಏಪ್ರಿಲ್ 28 ರಂದು ಆಯೋಜಿಸಿದ್ದ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಚಲನಚಿತ್ರ ನಟಿ ಉಮಾಶ್ರೀ (Umashree) ಅವರು ತಮ್ಮ ಭಾಷಣದಲ್ಲಿ ಬಳಸಿದ್ದ ಪದಗಳಿಗೆ ಸಂಬಂಧಿಸಿ ಅವರ ವಿರುದ್ಧ ಶಂಕರಲಿಂಗ ಎನ್ನುವವರು ನೀಡಿದ್ದ ದೂರು ಆಧರಿಸಿ ಮಸ್ಕಿ ಠಾಣೆ ಪೊಲೀಸರು ಬುಧವಾರ ಪ್ರಥಮ ತನಿಖಾ ವರದಿ (ಎಫ್ಐಆರ್) ಸಿದ್ಧಪಡಿಸಿ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.
ಬಿಜೆಪಿ ನಾಯಕರು ವಿಷಜಂತುಗಳು ಮತ್ತು ಕೋಮುವಾದ ಸೃಷ್ಟಿಸಿ ಬೆಂಕಿ ಹಚ್ಚುವವರು’ ಎಂಬುದಾಗಿ ಉಮಾಶ್ರೀ ಅವರು ಬಿಜೆಪಿ ವಿರುದ್ಧ ಆರೋಪ ಹೊರಿಸಿರುವುದಾಗಿದೆ.
ಶಂಕರಲಿಂಗ ಎನ್ನುವವರು ಮಸ್ಕಿ ಠಾಣೆಯಲ್ಲಿ ನೀಡಿರುವ ದೂರಿನಲ್ಲಿ ‘ ಇಂಥ ಭಾಷಣದಿಂದ ಸಮಾಜದಲ್ಲಿ ಭಯದ ವಾತಾವರಣ ನಿರ್ಮಾಣಗೊಂಡು, ಸಾರ್ವಜನಿಕ ಜೀವನದಲ್ಲಿ ನೆಮ್ಮದಿ ಹಾಳಾಗುವ ಸಾಧ್ಯತೆ ಇರುತ್ತದೆ. ಚುನಾವಣಾ ನೀತಿಸಂಹಿತೆ ಉಲ್ಲಂಘನೆಯಾಗಿದೆ. ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ತಿಳಿಸಲಾಗಿದೆ.
ಇದನ್ನೂ ಓದಿ: ಮತದಾರರಿಗೆ ಸಿಹಿ ಸುದ್ದಿ: ಯಾರೆಲ್ಲಾ ವೋಟ್ ಹಾಕ್ತಿರೋ ಅವರಿಗೆಲ್ಲಾ ವಂಡರ್ ಲಾ ದಿಂದ ರಿಯಾಯಿತಿ ದರ ಘೋಷಣೆ!
