Home » Mangaluru: ಕಾಂತಾರ ಸಿನಿಮಾ ಖ್ಯಾತಿಯ ಸ್ವರಾಜ್‌ ಶೆಟ್ಟಿ ನಿರ್ದೇಶನದ ʼನೆತ್ತರಕೆರೆʼ ಸಿನಿಮಾ ಸೆಟ್‌ನಲ್ಲಿ ಅಗ್ನಿ ಅವಘಡ

Mangaluru: ಕಾಂತಾರ ಸಿನಿಮಾ ಖ್ಯಾತಿಯ ಸ್ವರಾಜ್‌ ಶೆಟ್ಟಿ ನಿರ್ದೇಶನದ ʼನೆತ್ತರಕೆರೆʼ ಸಿನಿಮಾ ಸೆಟ್‌ನಲ್ಲಿ ಅಗ್ನಿ ಅವಘಡ

0 comments

Mangaluru: ಸಿನಿಮಾ ಚಿತ್ರೀಕರಣದ ಸೆಟ್‌ನಲ್ಲಿ ಅಗ್ನಿ ಅವಘಡ ನಡೆದಿರುವ ಘಟನೆಯೊಂದು ಇಂದು (ಜ.28) ಮಂಗಳೂರು ನಗರದ ಹೊರವಲಯದಲ್ಲಿ ನಡೆದಿದೆ.

ತುಳು ಮತ್ತು ಕನ್ನಡ ಭಾಷೆಯಲ್ಲಿ ಬರುತ್ತಿರುವ ʼನೆತ್ತರಕೆರೆʼ ಹೆಸರಿನ ಸಿನಿಮಾ ಚಿತ್ರೀಕರಣದಲ್ಲಿ ಹಾಕಿದ್ದ ಸೆಟ್‌ನ ಅಡುಗೆ ಕೋಣೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಟ್ಯಾಂಕರ್‌ ಮೂಲಕ ನೀರು ತಂದು ಬೆಂಕಿ ಆರಿಸಲಾಗಿದೆ.

ಕಾಂತಾರ ಸಿನಿಮಾ ಖ್ಯಾತಿಯ ʼಗುರುವʼ ಸ್ವರಾಜ್‌ ಶೆಟ್ಟಿ ಈ ಸಿನಿಮಾದಲ್ಲಿ ನಟನೆ ಜೊತೆಗೆ ಚಿತ್ರಕಥೆ, ನಿರ್ದೇಶನ ಕೂಡಾ ಮಾಡುತ್ತಿದ್ದಾರೆ.

You may also like