Home » IAS Intresting Question: ಮದುವೆಯ ನಂತರ ಹುಡುಗನಲ್ಲಿ ಶಾಶ್ವತವಾಗಿ ಇರುತ್ತೆ, ಆದರೆ ಹುಡುಗಿಗೂ ಅದು ಸಿಗುತ್ತೆ, ಏನದು ?

IAS Intresting Question: ಮದುವೆಯ ನಂತರ ಹುಡುಗನಲ್ಲಿ ಶಾಶ್ವತವಾಗಿ ಇರುತ್ತೆ, ಆದರೆ ಹುಡುಗಿಗೂ ಅದು ಸಿಗುತ್ತೆ, ಏನದು ?

by ಹೊಸಕನ್ನಡ
0 comments
IAS Intresting Question

IAS Intresting Question: ಪಾಸಿಟಿವ್ ಥಿಂಕಿಂಗ್ ಅಂದರೆ ಇತ್ಯಾತ್ಮಕ ಚಿಂತನೆಯ ಬಗ್ಗೆ ನಾವು ಕೇಳಿದ್ದೇವೆ. ಪಾಸಿಟಿವ್ ಥಿಂಕಿಂಗ್ ಅಥವಾ Optimistic attitude ಅಂದರೆ ಯಾವುದೇ ಸಂದರ್ಭದಲ್ಲಿ ಅಥವಾ ಸನ್ನಿವೇಶದಲ್ಲಿ ವ್ಯಕ್ತಿಯು ಯಾವಾಗಲೂ ಸಕಾರಾತ್ಮಕ ಚಿಂತನೆಗಳನ್ನೇ ಮಾಡುವುದು. ಭಾರತದ ಅತ್ಯುನ್ನತ ನಾಗರಿಕ ಸೇವಾ ಸಂಸ್ಥೆಯಾದ ಐಎಎಸ್ ಪರೀಕ್ಷೆಯನ್ನು ಪಾಸಾಗಳು ಅಲ್ಲಿ ಪ್ರತಿನಿಧಿಸುವ ಪ್ರತಿ ವ್ಯಕ್ತಿಯು ಅತ್ಯಂತ ಸಕಾರಾತ್ಮಕ ಮನೋಭಾವವನ್ನು ಇಟ್ಟುಕೊಂಡವನಿರಬೇಕು. ಈ ಪಾಸಿಟಿವ್ ಥಿಂಕಿಂಗ್ ಬಗ್ಗೆ ಎಷ್ಟು ಹೇಳಿದರು ಅರ್ಥ ಆಗಲಿಕ್ಕಿಲ್ಲ ಆದರೆ ಇವತ್ತು ನಾವು ಐಎಎಸ್ ಪರೀಕ್ಷೆಯಲ್ಲಿ ಕೇಳಿರುವ ಪಾಸಿಟಿವ್ ಥಿಂಕಿಂಗ್ ಬಗೆಗಿನ ಕೆಲವು ಪ್ರಶ್ನೆಗಳನ್ನು ಅವುಗಳಿಗೆ ಸಕಾರಾತ್ಮಕ ಮನೋಭಾವದಿಂದ ಅಭ್ಯರ್ಥಿ ಹೇಳಿದ ಉತ್ತರಗಳನ್ನು ಕೇಳಿ ತಿಳಿದುಕೊಳ್ಳೋಣ (IAS Intresting Question).

ಪ್ರಶ್ನೆ 1: ಮದುವೆಯ ನಂತರ, ಹುಡುಗನಲ್ಲಿ ಶಾಶ್ವತವಾಗಿ ಇರುತ್ತೆ. ಆದರೆ ಹುಡುಗಿಗೂ ಅದು ಸಿಗುತ್ತೆ, ಏನದು?
ಈ ಪ್ರಹ್ನೆ ಮೂಡಿದ ಕೂಡಲೇ ನಮಗೆ ಇದು ಯಾವುದೋ ಡಬ್ಬಲ್ ಮೀನಿಂಗ್ ಪ್ರಶ್ನೆ ಅಂತ ಮನದಟ್ಟಾಗುತ್ತದೆ. ಅದಕ್ಕೆ ತಕ್ಕಂತೆ ನಾವು ಯೋಚಿಸುತ್ತಾ ಹೋಗುತ್ತೇವೆ. ಅದು ಇರಬಹುದಾ, ಇದಾಗಬಹುದೇ ಎಂದು ನಮ್ಮ ಮನ ನೇತ್ಯಾತ್ಮಕ (ಅಂದರೆ ನೆಗೆಟಿವ್ ಥಿಂಕಿಂಗ್) ಆಗಿ ಯೋಚಿಸಲು ಪ್ರಾರಂಭಿಸುತ್ತದೆ. ಈ ಪ್ರಶ್ನೆ ತುಂಬಾ ಸರಳವಾದದ್ದು ಅದಕ್ಕೆ ಜಾಸ್ತಿ ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ.
ಉತ್ತರ: ಉಪನಾಮ (ಸರ್ ನೇಮ್, ಗಂಡನ ಹೆಸರನ್ನು ಹೆಂಡತಿಯೂ ತನ್ನ ಹೆಸರಿನ ಮುಂದೆ ಇಟ್ಟುಕೊಳ್ಳುವ ಅಭ್ಯಾಸ)
ಇನ್ನೂ ಕೆಲವು IAS ನಲ್ಲಿ ಕೇಳುವ ಇಂಟ್ರೆಸ್ಟಿಂಗ್ ಪ್ರಶ್ನೋತ್ತರ ಇಲ್ಲಿದೆ ನೋಡಿ.

ಪ್ರಶ್ನೆ 2: ಯಾವ ಅಂಗಡಿಗೆ ಹೋದಾಗ ನಾವು ನಮ್ಮ ವಸ್ತುವನ್ನೂ ಅಲ್ಲಿ ಕೊಟ್ಟು, ಜತೆಗೆ ದುಡ್ಡು ಕೂಡಾ ಕೊಟ್ಟು ಬರ್ತೇವೆ ?
ಉತ್ತರ: ಹೇರ್ ಕಟ್ಟಿಂಗ್ ಶಾಪ್ ನಲ್ಲಿ ಕೂದಲು
ಪ್ರಶ್ನೆ 3: ಓರ್ವ ಮನುಷ್ಯ 8 ದಿನಗಳ (8 day ) ಕಾಲ ನಿದ್ದೆ ಇಲ್ಲದೆ ಹೇಗೆ ಇರಬಲ್ಲ ?
ಉತ್ತರ: ಸಿಂಪಲ್ ಸಾರ್. ಡೇ ಮಲಗದೆ ಇದ್ರೆ ಏನಾಯ್ತು, ರಾತ್ರಿ ನಿದ್ದೆ ಹೊಡೆದ್ರಾಯ್ತು !!!
ಪ್ರಶ್ನೆ 4: ಯಾವ ಪ್ರಾಣಿ ಮೊಟ್ಟೆ ಮತ್ತು ಹಾಲು – ಈ ಎರಡನ್ನೂ ನೀಡುತ್ತದೆ ?
ಉತ್ತರ: ಪ್ಲಾಟಿಪಸ್

ಪ್ರಶ್ನೆ 5: ಅತ್ಯಂತ ಹೆಚ್ಚು ಹೃದಯಾಘಾತ ಆಗುವ ದಿನ ಯಾವುದು ?
ಉತ್ತರ: ಸೋಮವಾರ
ಪ್ರಶ್ನೆ 6: ಜಗತ್ತಿನ ಅತ್ಯಂತ ಉದ್ದವಾದ ನದಿ ಯಾವುದು ?
ಉತ್ತರ: ನೈಲ್ ನದಿ
ಪ್ರಶ್ನೆ 7: ಭಾರತದ ಅತ್ಯಂತ ಉದ್ದವಾದ ನದಿ ಯಾವುದು ?
ಉತ್ತರ: ಇಂಡಸ್ ನದಿ
ಪ್ರಶ್ನೆ 8: ಕರ್ನಾಟಕದ ಅತ್ಯಂತ ಉದ್ದವಾದ ನದಿ ಯಾವುದು ?
ಉತ್ತರ: ಕೃಷ್ಣಾ ನದಿ

ಇದನ್ನೂ ಓದಿ: ಕಾರ್ಕಳ:ಕೆಸರಿನಲ್ಲಿ ಹೂತು ಹೋಗಿದ್ದ ಗೋವು!! ಬೈಕ್ ಸವಾರರಿಂದ ರಕ್ಷಣೆ-ಶ್ಲಾಘನೆ

You may also like