5
Bengaluru: ಆರ್ ಸಿಬಿ ಯು ಬಹಳಷ್ಟು ಅಭಿಮಾನಿಗಳನ್ನು ಗಳಿಸಿದ್ದು, ಗುರುವಾರ ರಾತ್ರಿ ನಡೆದ ಪಂದ್ಯದಲ್ಲಿ ತಂಡವು ಪಂಜಾಬ್ ವಿರುದ್ಧ ಜಯ ಸಾಧಿಸಿದೆ.
ಹಾಗೂ ತಂಡವು ಈ ಮೂಲಕ ಫೈನಲ್ಗೆ ತಲುಪಿದ್ದು, ಈ ಮಧ್ಯೆ ಈ ವರ್ಷ ಟ್ರೋಫಿ ಗೆಲ್ಲುವ ಮೂಲಕ ಆರ್ಸಿಬಿ ಪ್ರಶಸ್ತಿ ಸಿಗದಿದ್ದರೆ ಪತಿಗೆ ವಿಚ್ಛೇದನ ನೀಡುವುದಾಗಿ ಮಹಿಳೆಯೊಬ್ಬರು ಸ್ಟೇಡಿಯಂನಲ್ಲಿ ಭಿತ್ತಿಪತ್ರ ಹಿಡಿದು ನಿಂತಿರುವುದು ಕಂಡುಬಂದಿದ್ದು, ಇದು ಕ್ಯಾಮರಾಗಳಲ್ಲಿ ಸೆರೆಯಾಗಿದೆ ಹಾಗೂ ಆರ್ ಸಿಬಿ ಗೆದ್ದ ತಕ್ಷಣವೇ ಈ ಫೋಸ್ಟರ್ ಸಾಮಾಜಿಕ ಜಾಲತಾಣಗಳಲ್ಲಿ ಬಹಳ ಮಟ್ಟಿಗೆ ವೈರಲ್ ಆಗುತ್ತಿದೆ.
ಈ ನಡುವೆ ಪ್ರಬಲ ಆಲ್-ರೌಂಡ್ ಪ್ರದರ್ಶನ ಮೆರೆದ ಆರ್ ಸಿಬಿ ಇನ್ನು 60 ಎಸೆತಗಳು ಬಾಕಿ ಇರುವಂತೆಯೇ ಪಂಜಾಬ್ ಕಿಂಗ್ಸ್ ವಿರುದ್ಧ 8 ವಿಕೆಟ್ ಗಳ ಭರ್ಜರಿ ಗೆಲುವು ಸಾಧಿಸಿದೆ. ಆರ್ಸಿಬಿ ಈಗಾಗಲೇ ಫೈನಲ್ ತಲುಪಿದ್ದು, ಈಗ ಕ್ವಾಲಿಫೈಯರ್ 2 ರ ವಿಜೇತರನ್ನು ಕಾಯುತ್ತಿದೆ.
